PRABHAVAA.COM

"ಪಿಎಂ-ಶ್ರೀ ಯೋಜನೆ: ಯೋಗ-ಕರಾಟೆ ತರಬೇತಿ ಒಂದೇ ಶಿಕ್ಷಕರಿಂದ ನಡೆಸುವ ಆದೇಶಕ್ಕೆ ರಾಜ್ಯ ಕರಾಟೆ ಶಿಕ್ಷಕರ ಸಂಘ ಆಕ್ಷೇಪ"

Bengaluru Urban:

Font size:

"ಪಿಎಂ-ಶ್ರೀ ಯೋಜನೆ: ಯೋಗ-ಕರಾಟೆ ತರಬೇತಿ ಒಂದೇ ಶಿಕ್ಷಕರಿಂದ ನಡೆಸುವ ಆದೇಶಕ್ಕೆ ರಾಜ್ಯ ಕರಾಟೆ ಶಿಕ್ಷಕರ ಸಂಘ ಆಕ್ಷೇಪ"

"ಪಿಎಂ-ಶ್ರೀ ಯೋಜನೆ: ಯೋಗ-ಕರಾಟೆ ತರಬೇತಿ ಒಂದೇ ಶಿಕ್ಷಕರಿಂದ ನಡೆಸುವ ಆದೇಶಕ್ಕೆ ರಾಜ್ಯ ಕರಾಟೆ ಶಿಕ್ಷಕರ ಸಂಘ ಆಕ್ಷೇಪ"

ಬೆಂಗಳೂರು,ಜು.13- ರಾಜ್ಯದಲ್ಲಿ ಪಿಎಂ-ಶ್ರೀ ಯೋಜನೆಯಡಿ ಯೋಗ ಮತ್ತು ಕರಾಟೆ ತರಬೇತಿ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ರಾಜ್ಯ ಕರಾಟೆ ಶಿಕ್ಷಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂಘದ ಅಧ್ಯಕ್ಷ ಮಹಮ್ಮದ್ ನದೀಮ್ ಕರಾಟೆ ಮತ್ತು ಯೋಗ ಎರಡೂ ವಿಭಿನ್ನ ವಿಷಯಗಳಾಗಿದ್ದು, ಅವುಗಳಿಗೆ ಪ್ರತ್ಯೇಕ ಪರಿಣಿತಿ ಹಾಗೂ ಬೋಧನಾ ವಿಧಾನ ಅಗತ್ಯವಿದೆ. ಆದರೆ ಸರ್ಕಾರದ ಆದೇಶದಂತೆ ಒಂದೇ ಶಿಕ್ಷಕರು ಎರಡೂ ತರಬೇತಿಗಳನ್ನು ನೀಡಬೇಕೆಂಬ ಷರತ್ತು ಪ್ರಾಯೋಗಿಕವಾಗಿಯೂ ಅವೈಜ್ಞಾನಿಕವಾಗಿಯೂ ಕಂಡುಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಜೂನ್ 2026ರಿಂದಲೇ ತರಬೇತಿ ಆರಂಭವಾಗಬೇಕಿದ್ದರೂ, ಅರ್ಹ ತರಬೇತುದಾರರ ಕೊರತೆಯಿಂದ ಅನೇಕ ಶಾಲೆಗಳಲ್ಲಿ ತರಬೇತಿ ಇನ್ನೂ ಪ್ರಾರಂಭವಾಗಿಲ್ಲ. ಕೆಲವು ಕಡೆಗಳಲ್ಲಿ ನಕಲಿ ಪ್ರಮಾಣಪತ್ರಗಳನ್ನು ಬಳಸಿ ಯೋಗ ಶಿಕ್ಷಕರು ಕರಾಟೆ ತರಬೇತುದಾರರಾಗಿ ನೇಮಕವಾಗಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಶಾಲಾ ಎಸ್‌ಡಿಎಂಸಿ ಹಾಗೂ ಮುಖ್ಯಶಿಕ್ಷಕರು ಅನುದಾನ ಬಳಕೆಯ ಉದ್ದೇಶದಿಂದ ಸೂಕ್ತ ಅರ್ಹತೆ ಇಲ್ಲದ ತರಬೇತುದಾರರನ್ನು ನೇಮಿಸುತ್ತಿರುವುದರಿಂದ ಯೋಜನೆಯ ಗುಣಮಟ್ಟಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಸಂಘದ ಅಧ್ಯಕ್ಷರು ಎಚ್ಚರಿಸಿದ್ದಾರೆ.

ಈ ಹಿಂದೆಯೂ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರ ಮೂಲಕ ಕರಾಟೆ ತರಬೇತಿ ನೀಡಲು ಆದೇಶ ಹೊರಡಿಸಿದ್ದರೂ, ಅದರ ಪ್ರಾಯೋಗಿಕ ಸಮಸ್ಯೆಗಳನ್ನು ಸಂಘ ಸರ್ಕಾರದ ಗಮನಕ್ಕೆ ತಂದ ನಂತರ ನೋಂದಾಯಿತ ಹಾಗೂ ಅರ್ಹ ಕರಾಟೆ ತರಬೇತುದಾರರ ಮೂಲಕವೇ ತರಬೇತಿ ನೀಡುವಂತೆ ಪರಿಷ್ಕರಣೆ ಮಾಡಲಾಗಿತ್ತು. ಆ ಕ್ರಮದಿಂದ ಯೋಜನೆಯ ಯಶಸ್ವಿ ಅನುಷ್ಠಾನ ಸಾಧ್ಯವಾಗಿತ್ತು ಎಂದು ಸಂಘದ ಅಧ್ಯಕ್ಷರು ನೆನಪಿಸಿದ್ದಾರೆ.

ಅದೇ ರೀತಿಯಲ್ಲಿ, ಪ್ರಸ್ತುತ ಹೊರಡಿಸಿರುವ ಯೋಗ ಮತ್ತು ಕರಾಟೆ ತರಬೇತಿಯನ್ನು ಒಬ್ಬರೇ ಶಿಕ್ಷಕರಿಂದ ನಡೆಸುವ ಆದೇಶವನ್ನೂ ಮರುಪರಿಶೀಲಿಸಿ, ರಾಜ್ಯ ಕರಾಟೆ ಶಿಕ್ಷಕರ ಸಂಘ, ಯೋಗ ತಜ್ಞರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಪ್ರಾಯೋಗಿಕ ಹಾಗೂ ವೈಜ್ಞಾನಿಕ ಮಾರ್ಗಸೂಚಿಗಳನ್ನು ರೂಪಿಸಿ ಹೊಸ ಆದೇಶ ಹೊರಡಿಸುವಂತೆ ಸಂಘದ ಅಧ್ಯಕ್ಷ ಮಹಮ್ಮದ್ ನದೀಮ್ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಯೋಜನೆಯ ನಿಜವಾದ ಉದ್ದೇಶ ಸಾಧಿಸಲು ಪ್ರತ್ಯೇಕ ಅರ್ಹ ಶಿಕ್ಷಕರ ಮೂಲಕವೇ ತರಬೇತಿ ನೀಡಿದರೆ ಮಾತ್ರ ಸಾಧ್ಯವಾಗುತ್ತದೆ ಎಂದು ಸಂಘದ ಅಭಿಪ್ರಾಯ ವ್ಯಕ್ತಪಡಿಸಿದೆ.

Comments

Leave a Comment

Prev Post ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್
Next Post ದೇವಾಲಯಗಳನ್ನು ಪ್ರವಾಸಿ ಸರ್ಕ್ಯೂಟ್‌ಗಳಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆ -ಪ್ರವಾಸೋದ್ಯಮ ಸುತ್ತೋಲೆ

ಶಾಸಕರಿಗೆ ಐಪಿಎಲ್ ಪಂದ್ಯಗಳ 3 ಟಿಕೆಟ್: ಡಿಸಿಎಂ ಡಿ.ಕೆ. ಶಿವಕುಮಾರ್

ಅಂತಾರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್ ಜತೆಗೆ ಹೆಚ್ಚುವರಿ 2 ಟಿಕೆಟ್ ಖರೀದಿಗೆ ಅವಕಾಶ

ಮಂಗಳೂರಿನ ಡಾ. ಗುರುಪ್ರಸಾದ್ ಭಟ್ – ಇಂಗ್ಲಿಷ್ ಚಾನೆಲ್ ಯಶಸ್ವಿಯಾಗಿ ಈಜಿದ ಮೊದಲ ಮಂಗಳೂರಿಗ

ಮಂಗಳೂರಿನ ಡಾ. ಗುರುಪ್ರಸಾದ್ ಭಟ್ – ಇಂಗ್ಲಿಷ್ ಚಾನೆಲ್ ಯಶಸ್ವಿಯಾಗಿ ಈಜಿದ ಮೊದಲ ಮಂಗಳೂರಿಗ

Read all News