ಟಿ.ಕೋನಪ್ಪರೆಡ್ಡಿ – ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ, ತಮ್ಮ ವಿರುದ್ಧದ ಆರೋಪಗಳಿಗೆ ದಾಖಲೆ ಸಮೇತ ಸ್ಪಷ್ಟನೆ
ಟಿ.ಕೋನಪ್ಪರೆಡ್ಡಿ – ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ, ತಮ್ಮ ವಿರುದ್ಧದ ಆರೋಪಗಳಿಗೆ ದಾಖಲೆ ಸಮೇತ ಸ್ಪಷ್ಟನೆ
ಬೆಂಗಳೂರು, ಜು. 1 - ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ **ಟಿ.ಕೋನಪ್ಪರೆಡ್ಡಿ** ಅವರು ತಮ್ಮ ವಿರುದ್ಧ ಹಾಲಿ ಪದಾಧಿಕಾರಿಗಳು 25.06.2026 ರಂದು ಪತ್ರಿಕಾ ಘೋಷಿಯಲ್ಲಿ ಮಾಡಿದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕೋನಪ್ಪರೆಡ್ಡಿಯವರ ಹೇಳಿಕೆಯ ಪ್ರಕಾರ, 17.09.2025 ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೇರ ನೇಮಕಾತಿ ಪ್ರಕ್ರಿಯೆ, ಪ್ರಕಟಣೆ ಹಾಗೂ ಆಯ್ಕೆ ಮಂಡಳಿ ರಚನೆಗೆ ಸಂಬಂಧಿಸಿದ ನಿರ್ಣಯಗಳನ್ನು ಅಧ್ಯಕ್ಷರು ಮಾತ್ರ ಸಹಿ ಮಾಡಿದ್ದು, ಅವರ ಸಹಿ ಇಲ್ಲ. ನೇಮಕಾತಿ ಆದೇಶಗಳು ನಿಯಮಾನುಸಾರ ಹೊರಡಿಸಲ್ಪಟ್ಟಿದ್ದು, ಆಸ್ಪತ್ರೆ ಹಾಗೂ ಸಂಘದ ಅಧೀನ ಸಂಸ್ಥೆಗಳಿಗೆ ಕಂಪ್ಯೂಟರ್ ಆಪರೇಟರ್ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ.
ಅಮಾನತ್ತು ಕುರಿತು ಅವರು ಸ್ಪಷ್ಟಪಡಿಸಿದ್ದು, 29.08.2024 ರಂದು ಬೈಲಾ ನಿಯಮಾವಳಿಗೆ ವಿರುದ್ಧವಾಗಿ ತಮ್ಮ ಸದಸ್ಯತ್ವವನ್ನು ಅಮಾನತ್ತು ಮಾಡಲಾಗಿತ್ತು. ನಂತರ ಸಹಕಾರ ಇಲಾಖೆ ಹಾಗೂ ನ್ಯಾಯಾಲಯದ ಆದೇಶದಂತೆ ಸಭೆಗಳಲ್ಲಿ ಭಾಗವಹಿಸಲು, ಮತ ಚಲಾಯಿಸಲು ಹಾಗೂ ಸಂಘದ ಎಲ್ಲಾ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ವೇತನ ತಾರತಮ್ಯ ಕುರಿತು 2022ರಲ್ಲಿ ನಿವೃತ್ತ IAS ಅಧಿಕಾರಿ ಶಂಕರನಾರಾಯಣರವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯ ವರದಿ ಆಧರಿಸಿ, 01.07.2022 ರಿಂದ ಆರ್ಥಿಕ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ.
ನಕಲಿ ಬ್ಯಾಂಕ್ ಗ್ಯಾರಂಟಿ ಆರೋಪಗಳ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದು, 05.02.2025ರ ಸಭೆಯ ತೀರ್ಮಾನದಂತೆ ಕೆಲವು ಕಂಪನಿಗಳ EMD ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 09.03.2025 ರಂದು 8 ಕಾಮಗಾರಿಗಳಿಗೆ ಟೆಂಡರ್ ಕರಾರು ಮಾಡಲಾಗಿದೆ.
*ಟಿ.ಕೋನಪ್ಪರೆಡ್ಡಿ ಅವರು, “ಎಲ್ಲಾ ಆರೋಪಗಳಿಗೆ ದಾಖಲಾತಿ ಸಮೇತ ಉತ್ತರ ನೀಡಲಾಗಿದೆ, ಪರಿಶೀಲಿಸಬಹುದು” ಎಂದು ತಿಳಿಸಿದ್ದಾರೆ.




Comments
Leave a Comment