ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವರ್ಗಾವಣೆ (IFS)
ಬೆಂಗಳೂರು, ಮೇ 25, 2026 — ಕರ್ನಾಟಕ ಸರ್ಕಾರವು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವರ್ಗಾವಣೆ (IFS)ಕುರಿತು ಹೊಸ ಆದೇಶ ಹೊರಡಿಸಿದೆ.
ಎಸ್. ಪ್ರಭಾಕರನ್,
ಅರಣ್ಯ ಸಂರಕ್ಷಕ ಹಾಗೂ ನಿರ್ದೇಶಕ, ಬಂಡೀಪುರ ರಾಷ್ಟ್ರೀಯ ಉದ್ಯಾನವನದಿಂದ ವರ್ಗಾವಣೆಗೊಂಡು ಮೈಸೂರು ವರ್ಕಿಂಗ್ ಪ್ಲಾನ್ ವಲಯದ ಅರಣ್ಯ ಸಂರಕ್ಷಕರಾಗಿ ನೇಮಕಗೊಂಡಿದ್ದಾರೆ.
ಶಿಂಡೆ ನಿಲೇಶ್ ದಿಯೋಬಾ, ಅಂಶಿ-
ದಾಂಡೆಲಿ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಕ ಹಾಗೂ ನಿರ್ದೇಶಕರು, ಕಲಬುರ್ಗಿ ವಿಭಾಗದ ಉಪ ಅರಣ್ಯ ಸಂರಕ್ಷಕರಾಗಿ ನೇಮಕಗೊಂಡಿದ್ದಾರೆ.
ಸುಮಿತ್ ಕುಮಾರ್ ಸುಭಾಷರಾವ್ ಪಾಟೀಲ್,
ಕಲಬುರ್ಗಿ ವಿಭಾಗದಿಂದ ವರ್ಗಾವಣೆಗೊಂಡು ವಿರಾಜಪೇಟು ವಿಭಾಗದ ಉಪ ಅರಣ್ಯ ಸಂರಕ್ಷಕರಾಗಿ ನೇಮಕಗೊಂಡಿದ್ದಾರೆ.
ಎನ್.ಹೆಚ್. ಜಗನ್ನಾಥ,
ವಿರಾಜಪೇಟು ವಿಭಾಗದಿಂದ ವರ್ಗಾವಣೆಗೊಂಡು ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲದ ಉಪ ಅರಣ್ಯ ಸಂರಕ್ಷಕರಾಗಿ ನೇಮಕಗೊಂಡಿದ್ದಾರೆ.
ಎಲ್. ನಂದೀಶ್,
ಅರಣ್ಯ ತಾಂತ್ರಿಕ ಮತ್ತು ಆಡಳಿತ ತರಬೇತಿ ಸಂಸ್ಥೆ, ಕಾಡುಗೋಡಿ, ಬೆಂಗಳೂರು ಇಂದ ವರ್ಗಾವಣೆಗೊಂಡು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಕರಾಗಿ ನೇಮಕಗೊಂಡಿದ್ದಾರೆ.







Comments
Leave a Comment