PRABHAVAA.COM

ಒಲಿಂಪಿಕ್ಸ್‌ನಲ್ಲಿ ಕನ್ನಡಿಗರು ಹೆಚ್ಚು ಪದಕ ಗೆಲ್ಲಬೇಕು: ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಗೋವಿಂದರಾಜು

Bengaluru Urban:

Font size:

ಕೆಒಎನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂಭ್ರಮ

ಬೆಂಗಳೂರು: ಮುಂಬರುವ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ಕನಿಷ್ಠ 10 ಪದಕಗಳನ್ನು ಗೆಲ್ಲುವಂತಾಗಬೇಕು. ಅವರಿಗೆ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಕೊಡಿಸಲು ನಾನು ಸಿದ್ದ' ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜು ಹೇಳಿದರು.

ಕರ್ನಾಟಕ ಒಲಿಂಪಿಕ್ ಭವನದಲ್ಲಿ ಶನಿವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

' ಒಲಿಂಪಿಕ್ಸ್ ನಲ್ಲಿ ಕರ್ನಾಟಕದಿಂದ 15 ರಿಂದ 20 ಕ್ರೀಡಾಪಟುಗಳು ಭಾಗವಹಿಸುವಂತಾಗಬೇಕು. ಈ ಪೈಕಿ 10 ರಿಂದ 15 ಪದಕಗಳನ್ನು ಕನ್ನಡಿಗರು ಗೆಲ್ಲಬೇಕು ಎಂಬುದೇ ನನ್ನ ಕನಸು' ಎಂದರು.

'ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನದ ನೆನಪಿಗಾಗಿ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತಿದೆ. ಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಇಂಥ ಆಚರಣೆಗಳು ಮಹತ್ವ ಪಾತ್ರವಹಿಸುತ್ತದೆ' ಎಂದು ಹೇಳಿದರು. ‌

* ಧ್ಯಾನ್ ಚಂದ್ ಪ್ರತಿಮೆಗೆ ಪುಷ್ಪಾರ್ಚನೆ

ಧ್ಯಾನ್ ಚಂದ್ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಡಾ.ಕೆ. ಗೋವಿಂದರಾಜು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಪುಷ್ಪಾರ್ಚನೆ ಮಾಡಿದರು. ಕೆಒಎ ಕಾರ್ಯದರ್ಶಿ ಅನಂತರಾಜು, ಮಾಜಿ ಹಾಕಿ ಆಟಗಾರರಾದ ಸುನೀಲ್, ಅರ್ಜುನ್ ಹಾಲಪ್ಪ, ನಿಕ್ಕಿನ್ ಉತ್ತಪ್ಪ, ಮಾಜಿ ಕ್ರೀಡಾಪಟುಗಳಾದ ಉದಯ್ ಪ್ರಭು, ಜಿ.ದಿಲೀಪ್ ಸೇರಿದಂತೆ ಕೆಒಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments

Leave a Comment

Prev Post ಆರ್.ಅಶೋಕ್ ಅವರು ನಾಗೇಂದ್ರ ವಿಚಾರದಲ್ಲಿ ವಾದ ಮಾಡಲು ಸಿಬಿಐ ಅಧಿಕಾರಿಯೇ: ಮಧು ಬಂಗಾರಪ್ಪ ಪ್ರಶ್ನೆ
Next Post ಮುಂದಿನ ಚುನಾವಣೆ- ನಾಗೇಂದ್ರ ನನ್ನ ವಿರುದ್ಧ ಸ್ಪರ್ಧಿಸಲಿ. 9 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ: ಶ್ರೀರಾಮುಲು

ಶಾಸಕರಿಗೆ ಐಪಿಎಲ್ ಪಂದ್ಯಗಳ 3 ಟಿಕೆಟ್: ಡಿಸಿಎಂ ಡಿ.ಕೆ. ಶಿವಕುಮಾರ್

ಅಂತಾರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್ ಜತೆಗೆ ಹೆಚ್ಚುವರಿ 2 ಟಿಕೆಟ್ ಖರೀದಿಗೆ ಅವಕಾಶ

"ಪಿಎಂ-ಶ್ರೀ ಯೋಜನೆ: ಯೋಗ-ಕರಾಟೆ ತರಬೇತಿ ಒಂದೇ ಶಿಕ್ಷಕರಿಂದ ನಡೆಸುವ ಆದೇಶಕ್ಕೆ ರಾಜ್ಯ ಕರಾಟೆ ಶಿಕ್ಷಕರ ಸಂಘ ಆಕ್ಷೇಪ"

"ಪಿಎಂ-ಶ್ರೀ ಯೋಜನೆ: ಯೋಗ-ಕರಾಟೆ ತರಬೇತಿ ಒಂದೇ ಶಿಕ್ಷಕರಿಂದ ನಡೆಸುವ ಆದೇಶಕ್ಕೆ ರಾಜ್ಯ ಕರಾಟೆ ಶಿಕ್ಷಕರ ಸಂಘ ಆಕ್ಷೇಪ"

ಮಂಗಳೂರಿನ ಡಾ. ಗುರುಪ್ರಸಾದ್ ಭಟ್ – ಇಂಗ್ಲಿಷ್ ಚಾನೆಲ್ ಯಶಸ್ವಿಯಾಗಿ ಈಜಿದ ಮೊದಲ ಮಂಗಳೂರಿಗ

ಮಂಗಳೂರಿನ ಡಾ. ಗುರುಪ್ರಸಾದ್ ಭಟ್ – ಇಂಗ್ಲಿಷ್ ಚಾನೆಲ್ ಯಶಸ್ವಿಯಾಗಿ ಈಜಿದ ಮೊದಲ ಮಂಗಳೂರಿಗ

Read all News