PRABHAVAA.COM

ಅಮೆರಿಕಾದ ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ ಅನುಕರಣೀಯ; ' ಬನ' ಮಹಾಧಿವೇಶನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ

:

Font size:

ಅಮೆರಿಕಾದ ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ ಅನುಕರಣೀಯ; ' ಬನ' ಮಹಾಧಿವೇಶನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ

news from Jayaram Udupi

ಅಮೆರಿಕಾದ ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ ಅನುಕರಣೀಯ;
' ಬನ' ಮಹಾಧಿವೇಶನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ.

ವಾಷಿಂಗ್ಟನ್‌:
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು ತಮ್ಮ ಮೂಲ ಸಂಸ್ಕೃತಿಯನ್ನು ಬಿಡದೆ ನವ ಪೀಳಿಗೆಗೂ ಅದರ ಅರಿವು ಮೂಡಿಸುತ್ತಿರುವುದು ಅನುಕರಣೀಯ ಕೆಲಸ ಎಂದು ಉದ್ಯಮಿ ಹಾಗು ಮಹಾ ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಕುಳೂರು ಹೇಳಿದ್ದಾರೆ.

ಅಮೆರಿಕಾದ ಸೀಟೆಲ್ ನಲ್ಲಿ ಉತ್ತರ ಅಮೆರಿಕಾ ಬಂಟರ ಸಂಘ 'ಬನ' ಆಯೋಜಿಸಿದ್ದ ೨೫ ನೇ ಹೆಗ್ಗುರುತು ಮಹಾ ಅಧಿವೇಶನ 'ದಿಬ್ಬಣ' ದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಶೆಟ್ಟಿ, ಅಮೆರಿಕಾ ತನ್ನ ಕನಸಿನ ದೇಶವಾಗಿತ್ತು ಎಂದರು.

ಭಾರತ ಮತ್ತು ಅಮೆರಿಕಾ ನಡುವಣ ಸಾಮ್ಯತೆಗಳನ್ನು ಪಟ್ಟಿ ಮಾಡಿದ ಅವರು ಅಮೆರಿಕಾದ್ದು ಚಾರಿತ್ರಿಕ ಪ್ರಜಾಪ್ರಭುತ್ವವಾದರೆ, ಭಾರತವು ಅತಿ ದೊಡ್ಡ ಪ್ರಜಾಪ್ರಭುತ್ವ . ಅಭಿವೃದ್ದಿಗೆ ಸಂಬಂಧಿಸಿ ಅಮೆರಿಕಾ ಅಧ್ಯಕ್ಷರು ಮತ್ತು ಭಾರತದ ಪ್ರಧಾನಿಯವರ ಬಹುತೇಕ ಚಿಂತನೆಗಳಲ್ಲಿ ಹೋಲಿಕೆ ಇದೆ ಎಂದರು.

ಅಮೆರಿಕಾದ ಈ ಬಂಟರ ಸಂಘ ' ಬನ' ಆಯೋಜಿಸಿದ ಮಾಹಾಧಿವೇಶನಕ್ಕೆ 'ದಿಬ್ಬಣ' ಎಂಬ ಶೀರ್ಷಿಕೆ ನೀಡಲಾಗಿದೆ.ಬನ ಎಂಬುದಕ್ಕೆ ಆಕಾಶ ಎಂಬ ಅರ್ಥವಿದೆ. ಈ ಸಂಘಟನೆ ವಿಸ್ತಾರವಾಗಿ ಮತ್ತು ಬಲಿಷ್ಟವಾಗಿ ಬೆಳೆಯಲಿ ಎಂದು ಹಾರೈಸಿದರು.

'ಬನ' ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ಮಹತ್ವವನ್ನು ಪ್ರತಿಬಿಂಬಿಸಿದ ಡಾ. ಶೆಟ್ಟಿ ಹತ್ತು ನಿಮಿಷಗಳಲ್ಲಿ ಮಹಾಕಾವ್ಯ ರಾಮಾಯಣವನ್ನು ಪ್ರಸ್ತುತಪಡಿಸುವ ಕಾರ್ಯವನ್ನು ಮಾಡುವ ಮೂಲಕ ಅಮೆರಿಕಾದಲ್ಲಿ ಜನಿಸಿದ ನವ ಪೀಳಿಗೆಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಮನದಟ್ಟು ಮಾಡುವ ಯತ್ನವನ್ನು ಮಾಡಿರುವುದು ಭಾರತೀಯರಿಗೆಲ್ಲ ಹೆಮ್ಮೆಯ ಸಂಗತಿ.ಅಮೆರಿಕಾದ ನೆಲದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸಂಗತಿಗಳನ್ನು ಹೊಂದಿಸಿಕೊಂಡು ಪ್ರಸ್ತುತಪಡಿಸುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಅಪಾರ ಸಮಯ, ಸಂಪನ್ಮೂಲ ಹಾಗು ಶ್ರಮ ಬೇಕಾಗುತ್ತದೆ ಎಂದರು.

ವಲಸೆ ಎಂಬುದು ಜಾಗತಿಕ ವಿದ್ಯಮಾನ ಎಂಬ ಅಂಶದತ್ತ ಗಮನ ಸೆಳೆದ ಡಾ. ಶೆಟ್ಟಿ, ಬಂಟ ಸಮುದಾಯ ಕೂಡ ಇದರಿಂದ ಮುಕ್ತವಾಗಿಲ್ಲ. ಅವರು ತಾವು ಹೋದಲ್ಲಿ ಸಂಘ ಕಟ್ಟಿಕೊಂಡು ಒಗ್ಗಟ್ಟು ಮೂಡಿಸುತ್ತಿದ್ದಾರೆ.ಇದಕ್ಕೆ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಮುಂಬೈ ಬಂಟರ ಸಂಘ ಸಹಿತ ಅನೇಕ ಸಂಘಗಳು ಉದಾಹರಣೆಯಾಗಿವೆ ಎಂದು ದೃಢಪಡಿಸಿದರು.

ಸಂಘಗಳು ಬಲಿಷ್ಟವಾದರೆ ಏಕತೆ ಬರುತ್ತದೆ, ಸಾಂಸ್ಕೃತಿಕ ಆಚರಣೆಗಳು ನಡೆಯುತ್ತವೆ.ನವ ಪೀಳಿಗೆಗೆ ಸಂಸ್ಕೃತಿ ಕಲಿಸುವ ಕೆಲಸ ನಡೆಯುತ್ತದೆ ಎಂದವರು ಸಂಘಗಳ ಸಾಮಾಜಿಕ ಹಾಗು ಸಾಂಸ್ಕೃತಿಕ ಜವಾಬ್ದಾರಿಯನ್ನು ವಿಶ್ಲೇಷಿಸಿದರು. ಬನ ಮಹಾಧಿವೇಶನವನ್ನು ಮೈಲಿಗಲ್ಲು ಸಂಭ್ರಮ ಎಂದೂ ಡಾ. ಶೆಟ್ಟಿ ಬಣ್ಣಿಸಿದರು.

' ಬನ'ದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಕಾಪು ವಾಸುದೇವ...ಮತ್ತಿತರರು ಉಪಸ್ಥಿತರಿದ್ದರು.

Comments

Leave a Comment

Prev Post ‎ಮಂಗಳೂರು ನಗರದಲ್ಲಿ ಎಐ ಸಿಸಿ ಕ್ಯಾಮರಾ ಮೂಲಕ ಸಂಚಾರ ನಿಯಂತ್ರಣ, ವೇಗ ಮಿತಿ ಉಲ್ಲಂಘನೆಗೆ ಕಟ್ಟುನಿಟ್ಟಿನ ಕ್ರಮ ‎ ‎from Jayaram Udupi ‎ಮಂಗಳೂರು: ‎ ‎ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ (ಕೃತಕ ಬುದ್ಧಿಮತ್ತೆ) ಸಿಸಿ ಕ್ಯಾಮರಾಗಳನ್ನ
Next Post ಸಚಿವ ಸಂಪುಟ ವಿಸ್ತರಣೆ : 19 ನೂತನ ಸಚಿವರಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ರಿಂದ ಗೌಪ್ಯತಾ ಪ್ರಮಾಣ ವಚನ ಬೋಧನೆ

21.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

21.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರ್ನಾಟಕದಲ್ಲಿ ಏಪ್ರಿಲ್ 25ರಿಂದ ಮಲೆನಾಡು, 26ರಿಂದ ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ

ಕರ್ನಾಟಕದಲ್ಲಿ ಏಪ್ರಿಲ್ 25ರಿಂದ ಮಲೆನಾಡು, 26ರಿಂದ ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ

06.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

06.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

09.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

09.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

17.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

17.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

09.06.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

09.06.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

Read all News