ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡಲು ಪುರೋಹಿತರ ಆಗ್ರಹ.
ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡಲು ಪುರೋಹಿತರ ಆಗ್ರಹ.
ಬೆಂಗಳೂರು ಜುಲೈ 28; ಆಗಸ್ಟ್-15ರ ಒಳಗೆ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ವತಿಯಿಂದ ಬೃಹತ್ ಸಮಾವೇಶ ಹಾಗೂ ಹಿಂದಿನ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ರಾಜ್ಯ ಮುಜರಾಯಿ ದೇವಾಲಯಗಳ ಆರ್ಚಕರ ಆಗಮಿಕರ ಮತ್ತು ನೌಕರರ ಸಂಘ ಆಗ್ರಹಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಶ್ರೀ ವತ್ಸ,ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ರಾಮಲಿಂಗರೆಡ್ಡಿಯವರು 8 ಬಾರಿ ಶಾಸಕರಾಗಿ ಸೋಲ್ಲಿಲದ ಸರದಾರರಾಗಿ ಆನೇಕ ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿ, ಕೊಟ್ಟ ಖಾತೆಗಳಿಗೆ ಜೀವ ತುಂಬಿ ಎಲ್ಲಾ ಖಾತೆಗಳಲ್ಲು ಉತ್ತಮ ಕಾರ್ಯನಿರ್ವಹಿಸಿ ಅಜಾತಶತೃಎನಿಸಿಕೊಂಡ ಮಂತ್ರಿಗಳಾಗಿದ್ದಾರೆ, ಮುಜರಾಯಿ ಸಚಿವರಾಗಿದ್ದಾಗ 1947 ಸ್ವಾತಂತ್ರ ಬಂದಾಗಿನಿಂದ ಅನೇಕ ಸರ್ಕಾರಗಳು ಬಂದವು ಹೋದವು ಆನೇಕರು ಮುಜರಾಯಿ ಸಚಿವರಾಗಿ ಹೋದರೂ ರಾಮಲಿಂಗರೆಡ್ಡಿಯವರು 2023ರಲ್ಲಿ ಸಚಿವರಾದ ಮೇಲೆ ದೇವಾಲಯಗಳಿಗೆ ಎ, ಬಿ ಮತ್ತು ಸಿ ವರ್ಗಗಗಳ ಅರ್ಚಕರಿಗೆ ಬಹಳ ಅನುಕೂಲಗಳನ್ನು ಮಾಡಿದ್ದಾರೆ.
ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ಮನವಿಗೆ ಸ್ಪಂದಿಸಿ ಒಂದೆ ದಿನದಲ್ಲಿ ಹಲವು ಆದೇಶಗಳನ್ನು ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದರು.
ಬಡ 'ಸಿ' ವರ್ಗಗಳ ಮುಜರಾಯಿ ದೇವಾಲಯಗಳ ಅರ್ಚಕರ ಒದುತ್ತಿರುವ ಮಕ್ಕಳಿಗೆ ಪ್ರತಿ ವರ್ಷ 7.000/- ರೂಪಾಯಿಗಳಿಂದ 1.00 ಲಕ್ಷದವರೆಗೆ ವಿದ್ಯಾಧನ ನಿಧಿ ನೀಡಲು ಆದೇಶ,ಉಚಿತವಾಗಿ ಕಾಶಿಯಾತ್ರೆ, ರಾಮೇಶ್ವರ ಯಾತ್ರೆಗೆ ಅರ್ಚಕರು ಮತ್ತು ಕುಟುಂಬದ ಒಬ್ಬ ಸದಸ್ಯರು ಹೋಗಲು ಆದೇಶ,ಅರ್ಚಕರು ಮರಣ ಹೊಂದಿದರೆ 2 ಲಕ್ಷ ರೂಪಾಯಿ ಪರಿಹಾರಧನ ನೀಡಲು ಆದೇಶ,ಕಾಯಿಲೆ ಇರುವ ವಯಸ್ಸಾದ ಮರಣ ಹೊಂದಿದ ಅರ್ಚಕರ ಮಕ್ಕಳಿಗೆ ತಹಶೀಲ್ದಾರ್ ಕಛೇರಿಯಲ್ಲಿ ಬರಾಬರ್ದ ನೇಮಕಾತಿ ಮಾಡುವಂತೆ ಆದೇಶ ನೀಡಿದ್ದಾರೆ ಎಂದು ಹೇಳಿದರು.
ಎಂ.ಎಸ್.ಬಿಲ್ಡಿಂಗ್ ಎದುರುಗಡೆ ಇರುವ ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ದಾರ್ಮಿಕ ಸೌಧ ನಿರ್ಮಾಣ ಮಾಡಲು ಆದೇಶ ಮಾಡಿ ಶಂಕು ಸ್ಥಾಪನೆ ಮಾಡಿದ ಕೀರ್ತಿ ರಾಮಲಿಂಗಾರೆಡ್ಡಿಯವರಾದಗಿದೆ ರಾಜ್ಯದ ಮುಜರಾಯಿ ದೇವಾಲಯಗಳಿಗೆ ಸೇರಿದ ಸಾವಿರಾರು ಕೋಟಿ ಬೆಲೆ ಬಾಳುವ ಜಮೀನುಗಳು ಜಾಗಗಳನ್ನು ಒತ್ತುವರಿ ಮಾಡಿರುವವರಿಂದ ಬಿಡಿಸಿ ಆಯಾಯ ದೇವಾಲಯಗಳ ಹೆಸರಿಗೆ ಖಾತೆ ಪಹಣಿ ಇಂಡಿಕರಣ ಮಾಡಿಸಿದ ಕೀರ್ತಿ ಇವರಾದಾಗಿದೆ ಈ ಹಿನ್ನಲೆಯಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಸ್ಥಾನ ನೀಡಬೇಕೆಂದು ಹೇಳಿದರು.






Comments
Leave a Comment