ಪೊಲೀಸ್ ಇನ್ಸ್ಪೆಕ್ಟರ್ಗಳ ಸ್ಥಳ ನಿಯುಕ್ತಿ
ಬೆಂಗಳೂರು, ಏ.23-ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿ ಮಾಡಲಾಗಿದೆ.
ಜಹೀರ್ ಅಹಮದ್ ಮೊಕಾಶಿ ಅವರನ್ನು ರಾಜ್ಯ ಗುಪ್ತವಾರ್ತೆಗೆ ನಿಯುಕ್ತಿಗೊಳಿಸಲಾಗಿದೆ.
ರಾಜಕುಮಾರ್ ವೈ. ಬೀಳಗಿಯನ್ನು ಪೊಲೀಸ್ ತರಬೇತಿ ಶಾಲೆ ಖಾನಾಪುರದಿಂದ ಸಿ.ಎಸ್.ಪಿ.ಗೆ ವರ್ಗಾಯಿಸಲಾಗಿದೆ.
ನಿಶ್ಚಲಕುಮಾರ್ ಡಿ.ಎಂ. ಅವರನ್ನು ಸಿ.ಎಸ್.ಪಿ.ಗೆ ನಿಯುಕ್ತಿಗೊಳಿಸಲಾಗಿದೆ.
ಬಸವರಾಜ್ ಎ. ಕಾಮನಬೈಲ್ ಅವರನ್ನು ವಿವಿಐಪಿ ಭದ್ರತೆ ಬೆಂಗಳೂರು ನಗರದಿಂದ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಶಶಿಕಲಾ ಎಸ್. ಅವರನ್ನು ಚೆಸ್ಕಾಂ ಜಾಗೃತದಳ ಚಾಮರಾಜನಗರದಿಂದ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ನಿಂಗನಗೌಡ ಎ. ಪಾಟೀಲ ಅವರನ್ನು ಮಹಿಳಾ ಪೊಲೀಸ್ ಠಾಣೆ-1 ಬಸವನಗುಡಿ ಬೆಂಗಳೂರು ನಗರದಿಂದ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ರೋಹಿಣಿ ರಾಜೇಂದ್ರ ಪಾಟೀಲ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ನಿಯುಕ್ತಿಗೊಳಿಸಲಾಗಿದೆ.
ಮುರಳಿ ಎಂ.ಎನ್. ಅವರನ್ನು ಎ.ಎನ್.ಟಿ.ಎಫ್. ಪೊಲೀಸ್ ಪ್ರಧಾನ ಕಛೇರಿಗೆ ವರ್ಗಾಯಿಸಲಾಗಿದೆ.
ನಾರಾಯಣ ಸ್ವಾಮಿ ಸಿ.ಎ. ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ.





Comments
Leave a Comment