ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ‘ಚಾಲಕರ ಸೇವಾರತ್ನ’ ಗೌರವ
ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ‘ಚಾಲಕರ ಸೇವಾರತ್ನ’ ಗೌರವ
ಬೆಂಗಳೂರು: ಮಧ್ಯ ಪ್ರಾಂಚ್ಯ ಪ್ರದೇಶದಲ್ಲಿ ಉಂಟಾದ ಸಂಘರ್ಷದ ಪರಿಣಾಮವಾಗಿ ರಾಜ್ಯದಲ್ಲಿ ಆಟೋಗಳಿಗೆ LPG ಗ್ಯಾಸ್ ಕೊರತೆ ಉಂಟಾಗಿ, ದೊರಕಿದರೂ ದುಪ್ಪಟ್ಟು ಬೆಲೆ ಕೇಳಲಾಗುತ್ತಿದ್ದ ಹಿನ್ನೆಲೆಯಲ್ಲಿ ಆಟೋ ಚಾಲಕರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದರು.
ಈ ಸಂಕಷ್ಟದ ಸಮಯದಲ್ಲಿ ಕನ್ನಡದ ಖ್ಯಾತ ಚಲನಚಿತ್ರ ನಟ ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಾನವೀಯತೆ ತೋರಿಸಿ, ಸುಮಾರು 25 ಲಕ್ಷ ರೂಪಾಯಿಗಳ ನೆರವು ನೀಡುವ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಆಟೋ ಚಾಲಕರಿಗೆ ಉಚಿತ LPG ಗ್ಯಾಸ್ ವಿತರಣೆ ಮಾಡಲು ಮುಂದಾದರು. ಅವರ ಈ ಸಾಮಾಜಿಕ ಸೇವೆಗೆ ಚಾಲಕರ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಈ ಸೇವೆಯನ್ನು ಗುರುತಿಸಿ, ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ವತಿಯಿಂದ ಧ್ರುವ ಸರ್ಜಾ ಅವರಿಗೆ ಕಂಚಿನ ಆಟೋ ಪ್ರತಿಮೆ ನೀಡಿ, ‘ಚಾಲಕರ ಸೇವಾರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರೇಡ್ ಯೂನಿಯನ್ ಗೌರವಾಧ್ಯಕ್ಷರಾದ ಗಂಡಸಿ ಸದಾನಂದಸ್ವಾಮಿ, ರಾಜ್ಯಾಧ್ಯಕ್ಷರಾದ ಸ್ನೇಹಜೀವಿ ಸಂತೋಷ್ ಕುಮಾರ್ ಸೇರಿದಂತೆ ರಾಜು ಕನ್ನಡಿಗ, ಶಿವಕುಮಾರ್, ಉಸ್ಮಾನ್ ಪಾಶ, ಶ್ರೀನಿವಾಸ್ ಬಾಬು, ಸ್ನೇಹಜೀವಿ ಸುಮಾ, ಶಿವು, ಮಂಜುನಾಥ್, ಕಡೆಶ್, ದಂಡಪ್ಪ ಮತ್ತು ನೂರಾರು ಚಾಲಕರು ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು, ಸಂಕಷ್ಟದ ಸಮಯದಲ್ಲಿ ಚಾಲಕರಿಗೆ ಬೆಂಬಲವಾಗಿ ನಿಂತ ಧ್ರುವ ಸರ್ಜಾ ಅವರ ಸೇವೆಯನ್ನು ಸದಾ ಸ್ಮರಿಸಲಾಗುವುದು ಎಂದು ಹೇಳಿದರು.





Comments
Leave a Comment