ನ್ಯಾಮತಿ ಭಾರಿ ಬ್ಯಾಂಕ್ ಕಳ್ಳತನ ಪತ್ತೆ “೬ ಜನ ಆರೋಪಿ ಬಂದನ ೧೭.೦೧ ಕೆಜಿ ಬಂಗಾರ ಆಭರಣ (ಅಂದಾಜು ೧೫.೩೦ ಕೋಟಿ ಮೌಲ್ಯ) ವಶ”
ಪತ್ರಿಕಾ ಪ್ರಕಟಣೆ
ನ್ಯಾಮತಿ ಭಾರಿ ಬ್ಯಾಂಕ್ ಕಳ್ಳತನ ಪತ್ತೆ “೬ ಜನ ಆರೋಪಿ ಬಂದನ ೧೭.೦೧ ಕೆಜಿ ಬಂಗಾರ ಆಭರಣ
(ಅಂದಾಜು ೧೫.೩೦ ಕೋಟಿ ಮೌಲ್ಯ) ವಶ”
ಅಕ್ಟೋಬರ್ ೨೮, ೨೦೨೪ ರಂದು, ದಾವಣಗೆರೆಯ ನ್ಯಾಮತಿ ಎಸ್ಬಿಐ ಬ್ಯಾಂಕಿನ ಶಾಖೆಯಲ್ಲಿ
ಅಂದಾಜು ೧೩ ಕೋಟಿ ಮೌಲ್ಯದ (ನಿವ್ವಳ ತೂಕ -೧೭.೭ ಕೆಜಿ) ಅಡವಿಟ್ಟ ಚಿನ್ನಾಭರಣಗಳನ್ನು ಯಾರೋ ಕಳ್ಳರು
ಕಳ್ಳತನ ಮಾಡಿರುವ ಬಗ್ಗೆ ಸಿ ಆರ್ ನಂ ೨೨೯/೨೦೨೪ ೩೦೫, ೩೩೧(೩) ೩೩೧(೪) ಬಿಎನ್ಎಸ್ ರಿತ್ಯಾ ಪ್ರಕರಣ
ಠಾಣೆಯಲ್ಲಿ ವರದಿಯಾಗಿರುತ್ತದೆ. ಬ್ಯಾಂಕ್ ಸಿಬ್ಬಂದಿಗಳು ಸುಮಾರು ಬೆಳಿಗ್ಗೆ ೦೯ ಗಂಟೆಗೆ ಎಂದಿನAತೆ
ಬ್ಯಾಂಕ್ ತೆರೆಯಲು ಬಂದಾಗ ಸದರಿ ಪ್ರಕರಣ ಬೆಳಕಿಗೆ ಬಂದಿರುತ್ತದೆ. ಕೂಡಲೇ ಸದರಿ ಸ್ಥಳಕ್ಕೆ ಮಾನ್ಯ
ಐಜಿಪಿ & ಎಸ್ಪಿ, ಎಎಸ್ಪಿರವರು ಒಳಗೊಂಡAತೆ ಎಲ್ಲಾ ಅಧಿಕಾರಿಗಳು ಬೇಟಿ ನೀಡಿ ಸ್ಥಳ ಪರಿಶೀಲನೆ
ಮಾಡಿರುತ್ತಾರೆ ಹಾಗೂ ಸದರಿ ಸ್ಥಳಕ್ಕೆ ಎಫ್ಎಸ್ಎಲ್ ವ್ಯಾನ್, ಸೋಕೊ ಅಧಿಕಾರಿ, ಡಾಗ್ ಸ್ಯ್ಕಾಡ್ &
ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ಮಾಡಿರುತ್ತದೆ. ಬ್ಯಾಂಕ್ನ ಬಲಬಾಗದ ಕಬ್ಬಿಣದ ಕಿಟಿಕಿಯ ಗ್ರೀಲ್ನ್ನು
ಕಟ್ ಮಾಡಿ ಕಳ್ಳರು ಒಳ ಪ್ರವೇಶಿಸಿದ್ದು ತದನಂತರ ಸಿಸಿ ಟಿವಿ, ಅಲರಾಮ್ ಮತ್ತು ಎಲ್ಲಾ ವೈರಗಳ ಕನೆಕ್ಷನ್
ತೆಗೆದು ನಂತರ ಸ್ಟಾçಂಗ್ ರೂಂಗೆ ಇದ್ದಂತಹ ಗ್ರೀಲ್ ಡೋರನ ಬೀಗವನ್ನು ಮುರಿದು ಒಳಗೆ ಬಂದು ಅಲ್ಲಿ
ಇದ್ದಂತಹ ನಾಲ್ಕು ಕರೆನ್ಸಿ ಚೆಸ್ಟ್ಗಳಲ್ಲಿ ಒಂದನ್ನು ಗ್ಯಾಸ್ ಕಟ್ಟರ್ನ ಸಹಾಯದಿಂದ ಕೊರೆದು ಲಾಕರ್ ಬಾಗಿಲು
ತೆಗೆದು ಅದರಲ್ಲಿ ಸಾರ್ವಜನಿಕರು ಅಡವಿಟ್ಟಿದ್ದ ಚಿನ್ನಾಭರಣಗಳ ಟ್ರೇನಲ್ಲಿ ಇದ್ದಂತಹ ಸುಮಾರು ೧೭.೭ ಕೆಜಿ
ಆಭರಣಗಳನ್ನು ಕದ್ದುಕೊಂಡು ಸಾಕ್ಷಿ ನಾಶ ಮಾಡುವ ಸಲುವಾಗಿ ಸ್ಟಾçಂಗ್ ರೂಂ, ಬ್ಯಾಂಕ್ ಮ್ಯಾನೆಜರ್
ರೂಮ್ ಹಾಗೂ ಕಟ್ ಮಾಡಿರುವ ಕಿಟಿಕಿಯವರೆಗೆ ಖಾರದ ಪುಡಿಯನ್ನು ಚಲ್ಲಿ ಹೋಗಿರುತ್ತಾರೆ. ಆ ದಿವಸ
ಹೆಚ್ಚು ಮಳೆ ಬರುತ್ತಿದ್ದು ಬ್ಯಾಂಕ್ ನ ಹಿಂದೆ ಹೆಚ್ಚು ಜಾಲಿ ಗಿಡಗಳು ಬೆಳೆದಿರುತ್ತದೆ ಹಾಗೂ ಮಳೆ ನೀರು
ನಿಂತಿರುತ್ತದೆ ಹಾಗೂ ಕೃತ್ಯ ನಡೆದ ಸ್ಥಳದಲ್ಲಿ ಯಾವುದೇ ರೀತಿಯ ಸಾಕ್ಯಗಳನ್ನು ಸಂಗ್ರಹಿಸುವುದು
ಕಠಿಣವಾಗಿರುತ್ತದೆ.
ಪ್ರಕರಣದ ತನಿಖಾಧಿಕಾರಿಯನ್ನಾಗಿ ಚನ್ನಗಿರಿ ಉಪ ವಿಭಾಗದ ಶ್ಯಾಮ್ ವರ್ಗೀಸ್ ಎಎಸ್ಪಿ ರವರನ್ನು
ನೇಮಕ ಮಾಡಿದ್ದು ಸದರಿಯವರಿಗೆ ತನಿಖೆಯಲ್ಲಿ ಸಹಕರಿಸಲು ಡಿವೈಎಸ್ಪಿ ಗ್ರಾಮಾಂತರ ಉಪವಿಭಾಗ
ಬಸವರಾಜ್ ಬಿ.ಎಸ್ ರವರನ್ನು ಒಳಗೊಂಡಂತೆ ಐದು ತಂಡಗಳನ್ನು ರಚಿಸಲಾಗಿತ್ತು. ಮೊದಲ ದಿನದಿಂದಲ್ಲೇ
ಪ್ರತಿ ತಂಡಕ್ಕೂ ಪ್ರತ್ಯೇಕವಾದ ಕೆಲಸಗಳನ್ನು ನಿಯೋಜನೆ ಮಾಡಲಾಗಿತ್ತು ಅವರು ಎಲ್ಲಾ ರೀತಿಯ ತಾಂತ್ರಿಕ &
ಭೌತಿಕ ಸಾಕ್ಷಾö್ಯದಾರಗಳನ್ನು ಪರಿಶೀಲಿಸುವುದರ ಜೊತೆಗೆ ಸುಮಾರು ೬ ರಿಂದ ೮ ಕಿಲೋ ಮೀ ವರೆಗೆ
ಬ್ಯಾಂಕ್ನ ಸುತ್ತಲು ಕೂಲಂಕುಷವಾಗಿ ಪರಿಶೀಲಿಸಲಾಗಿತ್ತು. ಆದರೆ ಯಾವುದೇ ಉಪಯುಕ್ತ ಮಾಹಿತಿಗಳು
ಲಭ್ಯವಾಗಿರುವುದಿಲ್ಲ.
ಈವರೆಗೆ ನಡೆಸಿದ ಪ್ರಯತ್ನಗಳ ಬಗೆಯ ವಿವರ
೧. ಈ ಹಿಂದೆ ದಾಖಲಾಗಿರುವ ಬ್ಯಾಂಕ್ ದರೋಡೆ ಎಟಿಎಂ ಕಳ್ಳತನ ಪ್ರಕರಣಗಳ ವಿವರ, ಹಳೆಯ
ಆರೋಪಿಗಳ ವಿವರ, ಅಂತರ್ ರಾಜ್ಯ ಗ್ಯಾಂಗ್ಗಳ ವಿವರಗಳನ್ನು ಪಡೆದು ಅವುಗಳನ್ನು ಅನಾಲಿಸಿಸ್
ಮಾಡಿ ಪೊಲೀಸ್ ಅಧಿಕಾರಿಗಳ ತಂಡ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ ೫ ತಿಂಗಳು ಕಾಲ
ಸಮಗ್ರ ಕೂಲಂಕುಷವಾಗಿ ಮಾಹಿತಿಯನ್ನು ಸಂಗ್ರಹಿಸಲಾಗಿರುತ್ತದೆ
೨. ತಾಂತ್ರಿಕ ಮೂಲಗಳಿಂದ ದೊರೆತ ಸುಳಿವಿನಿಂದ ಹಾಗೂ ಹಿಂದೆ ನಡೆದ ಬ್ಯಾಂಕ್ ದರೋಡೆ
ಪ್ರಕರಣಗಳ ಅನಾಲಿಸಿಸ್ ನಿಂದ ನಮ್ಮ ಎಸ್.ಬಿ.ಐ ಬ್ಯಾಂಕ್ ಪ್ರಕರಣದಲ್ಲಿ ಉತ್ತರ ಪ್ರದೇಶ ರಾಜ್ಯದ
ಬದಾಯ ಜಿಲ್ಲೆಯ ಕಕ್ರಾಳ ಗ್ಯಾಂಗ್ ನವರು ಇರಬಹುದು ಎಂಬ ಸಂಶಯದಿAದ ನಮ್ಮ ತಂಡಗಳು
ಉತ್ತರ ಪ್ರದೇಶದ ಕಕ್ರಾಳಗೆ ನವಂಬರ್ ಎರಡನೇ ವಾರದಲ್ಲಿ ತೆರಳಿದ್ದು ಅಲ್ಲಿ ಸ್ಥಳೀಯ ಪೊಲೀಸ್
ಎಸ್ಓಜಿ ರವರ ಸಹಯೋಗದೊಂದಿಗೆ ಸುಮಾರು ೧೫ಕ್ಕು ಹೆಚ್ಚು ಅಂತರ್ ರಾಜ್ಯ ಸಂಶಯಾತ್ಮಕ
ವ್ಯಕ್ತಿಗಳನ್ನು ವಶಕ್ಕೆ ಪಡೆದು ಸಂಪೂರ್ಣ ವಿವರಗಳನ್ನು ಪಡೆದಿರುತ್ತಾರೆ.
೩. ಎಸ್ ಬಿ ಐ ಬ್ಯಾಂಕ್ ನ್ಯಾಮತಿ ಪ್ರಕರಣಕ್ಕಿಂತ ಹಿಂದೆ ೨೦೨೪ರಲ್ಲಿ ದಾಖಲಾದಂತಹ ಕರ್ನಾಟಕ
ಹಾಗೂ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಕಳ್ಳತನ, ದರೋಡೆ ಮತ್ತು ದರೋಡೆ ಪ್ರಯತ್ನ ಪಟ್ಟಂತಹ
ಪ್ರಕರಣಗಳನ್ನು ಪರಿಶೀಲಿಸಲಾಯಿತು. ಅದರಲ್ಲಿ ಆಗಸ್ಟ್ ೨ ೨೦೨೪. ರಂದು ಭದ್ರಾವತಿ ತಾ
ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಎಸ್ ಬಿ ಐ ಬ್ಯಾಂಕ್ ಕಳ್ಳತನದ ಪ್ರಯತ್ನ ನಡೆದ ಪ್ರಕರಣವನ್ನು
ಪರಿಶೀಲಿಸಿದಾಗ ನ್ಯಾಮತಿಗೆ ೩೦ಕಿಲೋಮಿ ಹತ್ತಿರವಿರುವುದು ಮತ್ತು ನಮ್ಮ ಬ್ಯಾಂಕ್ನ ಪ್ರಕರಣಕ್ಕೆ
ಸಾಮ್ಯತೆ ಇರುವುದರಿಂದ ಆ ಪ್ರಕರಣದ ತಾಂತ್ರಿಕ ವಿವರಗಳನ್ನು ಆಳವಾಗಿ ವಿಶ್ಲೇಷಣೆ ಮಾಡಿದ
ನಂತರ ನಮ್ಮ ತನಿಖೆಯ ದಿಕ್ಕು ಮತ್ತೆ ಉತ್ತರಪ್ರದೇಶದ ಬದಾಯು ಜಿಲ್ಲೆಯ ಕಕ್ರಾಳ ಗ್ಯಾಂಗ್ ಕಡೆಗೆ
ಹೋಯಿತು.
ಮತ್ತೊಮ್ಮೆ ನಮ್ಮ ಅಧಿಕಾರಿ & ಸಿಬ್ಬಂಧಿಗಳ ತಂಡವು ಜನವರಿ ಮೊದಲನೇ ವಾರ ಕಕ್ರಾಳ
ಬದಾಯುಗೆ ಹೋಗಿ ಅಲ್ಲಿನ ವಿಪರೀತ ಚಳಿಯ & ವೈಪರಿತ್ಯ ಹವಾಮಾನಗಳ ನಡುವೆಯು ಅಲ್ಲಿನ
ಸ್ಥಳೀಯ ಪೊಲೀಸ್ ನ ಸಹಯೋಗವಿಲ್ಲದೆ ಸಂಶಯಾಸ್ಪದ ವ್ಯಕ್ತಿಗಳ ಮನೆಯ ಮೇಲೆ ದಾಳಿ ಮಾಡಿ
ಹೆಚ್ಚಿನ ಮಾಹಿತಿ ಕಲೆಹಾಕಿ ನಮ್ಮ ಅಧಿಕಾರಿ & ಸಿಬ್ಬಂದಿಗಳ ತಂಡವು ೩ ವಾರಗಳ ಕಾಲ ಬೀಡು ಬಿಟ್ಟು
ಹಿಂದಿರುಗಿರುತ್ತದೆ ಹಾಗೂ ಕೆಲವು ಸಿಬ್ಬಂದಿಗಳನ್ನು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಬಿಟ್ಟು
ಬಂದಿರುತ್ತೇವೆ.
೪. ಮತ್ತೊಂದು ತಂಡವು ಫೆಬ್ರವರಿ ಮೊದಲನೇಯ ವಾರದಲ್ಲಿ ಹರಿಯಾಣ, ಹಿಮಾಚಲ ಪ್ರದೇಶ,
ಕಾಕಿನಾಡ, ವಾರಂಗಲ್, ಕೋಲಾರ, ತಮಿಳುನಾಡು & ಕೇರಳಾ ರಾಜ್ಯಗಳಿಗೆ ತಂಡವು ಭೇಟಿ ನೀಡಿ
ಆರೋಪಿಗಳಿಗಾಗಿ ಶೋಧನೆ ಮಾಡಿರುತ್ತಾರೆ.
ಮತ್ತೊಂದು ದರೋಡೆ ತಂಡದ ಬಂಧನ ಮತ್ತು ಕುಖ್ಯಾತ ಆರೋಪಿಗಳ ಬಂಧನ.
ಈ ಪ್ರಯತ್ನಗಳ ಫಲವಾಗಿ ಪೊಲೀಸ್ ಅಧಿಕಾರಿಗಳಿಗೆ ಬಂದಂತಹ ಮಾಹಿತಿ ಮೇರೆಗೆ
ಮಾರ್ಚ್ -೧೬ ರಂದು ಎಸ್ಬಿಐ ಸವಳಂಗ ಬ್ರಾಂಚ್ಗೆ ಡಕಾಯಿತಿ ಮಾಡಲು ಬಂದಿದ್ದAತಹ
ತಂಡದಲ್ಲಿನ ನಾಲ್ವರನ್ನು ಸೆರೆ ಹಿಡಿಯುವಲ್ಲಿ ತಂಡವು ಯಶಸ್ವಿಯಾಗಿದೆ ಹಾಗೂ ಮತ್ತೆ ಆಗಬಹುದಾದ
ಬ್ಯಾಂಕ್ ದರೋಡೆ ಕಳ್ಳತನ ದೊಡ್ಡ ಪ್ರಕರಣವನ್ನು ತಡೆಗಟ್ಟಿದಂತಾಗಿದೆ.
೧) ಗುಡ್ಡು @ ಗುಡ್ಡು ಕಾಲಿಯಾ ತಂದೆ ಇಸ್ತಾಕ್ ಅಲಿ, ೪೫ ವರ್ಷ, ಕಕ್ರಾಳ, ಬಾದಯು ಜಿಲ್ಲೆ ಉತ್ತರ
ಪ್ರದೇಶ
೨) ಅಸ್ಲಾಂ @ ಟನ್ ಟನ್ ತಂದೆ ಮಿತ್ವಾರಿ, ೫೫ ವರ್ಷ, ಕಕ್ರಾಳ, ಬಾದಯು ಜಿಲ್ಲೆ ಉತ್ತರ ಪ್ರದೇಶ
೩) ಹಜರತ್ ಅಲಿ ತಂದೆ ಸಾದಿಕ್ ಅಲಿ, ೫೦ ವರ್ಷ, ಕಕ್ರಾಳ, ಬಾದಯು ಜಿಲ್ಲೆ ಉತ್ತರ ಪ್ರದೇಶ
೪) ಕಮರುದ್ದೀನ್ @ ಬಾಬು ಸೆರೆಲಿ ಬಾದಯ್ ಜಿಲ್ಲೆ ಉತ್ತರ ಪ್ರದೇಶ ರಾಜ್ಯದವರು ಬಂಧಿತರಾಗಿದ್ದು
ಕುಖ್ಯಾತ ಅಂತರ್ ರಾಜ್ಯ ಬ್ಯಾಂಕ್ ದರೋಡೆಕೋರರಾಗಿದ್ದು ಒಬ್ಬರನ್ನು ಬಿಟ್ಟು ಉಳಿದವರು ಈ ಹಿಂದೆ
ಎಲ್ಲಿಯೂ ಬಂಧಿತರಾಗಿರುವುದಿಲ್ಲ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕ ಬ್ಯಾಂಕ್
ಹೊಸಳ್ಳಿ ಪ್ರಕರಣದಲ್ಲಿ ೧೫ ಬಂಗಾರ ಆಭರಣ, ಕೊಪ್ಪಳ ಬೆವೂರು ಕರ್ನಾಟಕ ಬ್ಯಾಂಕ್ ಕಳ್ಳತನ
ಪ್ರಕರಣಗಳಲ್ಲಿ ೦೪ ಕೆಜಿ ಬಂಗಾರ ಆಭರಣಗಳನ್ನು ಕಳ್ಳತನ ಭಾಗಿಯಾಗಿ ತಲೆಮರೆಸಿಕೊಂಡಿದ್ದ
ವಾರೆAಟ್ ಆಸಾಮಿಗಳಾಗಿದ್ದು ೨೦೧೪ರಿಂದ ೨೦೨೪ ರವರಿಗೆ ಸರಣಿ ಬ್ಯಾಂಕ್ ಕಳ್ಳತನ ಪ್ರಕರಣಗಳಲ್ಲಿ
ಭಾಗಿಯಾಗಿರುವುದು ಕಂಡು ಬಂದಿರುತ್ತದೆ. ಅಲ್ಲದೆ ಭದ್ರಾವತಿ ಎಸ್ಬಿಐ ಬ್ಯಾಂಕ್ ಪ್ರಯತ್ನ,
ತೆಲಾಂಗಾಣ ರಾಜ್ಯದ ವಾರಂಗಲ್ ಎಸ್ಬಿಐ ಕಳ್ಳತನ , ಹಾವೇರಿ ತಡಸ್ ಬಂಗಾರ ಅಂಗಡಿ ಕಳ್ಳತನ,
ಜಾರ್ಖಂಡ್ ರಾಜ್ಯ ಬ್ಯಾಂಕ್ ಕಳ್ಳತನ ಪ್ರಯತ್ನ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ವಾರೆಂಟ್
ಇರುವುದು ಕಂಡುAದಿರುತ್ತದೆ ಹಾಗೂ ಇದೆ ಪ್ರಕರಣಕ್ಕೆ ಸಂಬಂದಿಸಿದಂತೆ ಕೋಲಾರ್ ಮಾಲೂನಿಂದ
ಬಾಬುಸಹಾ ತಂದೆ ಬನ್ನೆಸಹಾ, ನೌಲಿ ಗ್ರಾ, ಬಾದಯು ಜಿಲ್ಲೆ, ಉತ್ತರ ಪ್ರದೇಶ ರಾಜ್ಯ & ಹಫೀಜ್ ತಂದೆ
ಸಯೈದ್. ಕೋಲಾರ ಜಿಲ್ಲೆ ರನ್ನು ಬಂಧಿಸಿದ್ದು ಇದರಿಂದ ಖ್ಯಾತ ಆರು ಅಂತರ್ ರಾಜ್ಯ ಬ್ಯಾಂಕ್
ದರೋಡೆಕೋರರನ್ನು ಬಂಧಿಸಿದAತಾಗಿರುತ್ತದೆ.
ಪ್ರಸ್ತುತ ಪ್ರಕರಣದ ಪತ್ತೆ
ಮಾರ್ಚ್ನ ಮೂರನೇ ವಾರದಲ್ಲಿ ನಮ್ಮ ತಂಡಗಳು ಈಗಾಲೇ ನಮ್ಮ ಬಳಿ ಇದ್ದಂತಹ
ತಾಂತ್ರಿಕ ಅಂಶಗಳು & ಮಾಹಿತಿಗಳನ್ನು ತಾಳೆ ಮಾಡಿ ನೋಡಿದಾಗ ನಮ್ಮ ಪ್ರಕರಣಕ್ಕೆ ಹೋಲುವ
ಹಾಗೂ ಅವಶ್ಯವಿರುವ ಕೆಲವು ಪ್ರಮುಖ ಅಂಶಗಳು ಬೆಳಕಿಗೆ ಬಂದಿರುತ್ತವೆ. ಸದರಿ ಮಾಹಿತಿಯನ್ನು
ಆಳವಾಗಿ ವಿಶ್ಲೇಷಿಸಿದಾಗ ನ್ಯಾಮತಿ ಎಸ್ಬಿಐ ಬ್ಯಾಂಕ್ ಗೆ ಸಂಬಂಧಿಸಿದ ಆರೋಪಿಗಳ ಬಗ್ಗೆ
ಮಹತ್ವದ ಸುಳಿವು ದೊರೆತಿದ್ದು ಈ ಸುಳಿವಿನ ಆಧಾರದ ಮೇಲೆ ನಮ್ಮ ತಂಡಗಳು-
೧. ವಿಜಯಕುಮಾರ್ ತಂದೆ ರಾಜಪ್ಪ, ೩೦ ವರ್ಷ, ಸಿಹಿ ತಿಂಡಿ ವ್ಯಾಪಾರ, ಸುರಹೊನ್ನೆ ಶಾಂತಿನಗರ,
ಮೂಲತಃ ಮಧುರೈ. ತಮಿಳುನಾಡು.
೨. ಅಜಯಕುಮಾರ್ ತಂದೆ ರಾಜಪ್ಪ, ೨೮ ವರ್ಷ, ಸಿಹಿ ವ್ಯಾಪಾರ, ಸುರಹೊನ್ನೆ ಶಾಂತಿನಗರ, ವಿಜಯ್
ಅವರ ಮಧುರೈ ಸಹೋದರ ನ್ಯಾಮತಿ.
೩. ಅಭಿಷೇಕ ತಂದೆ ರಾಮಪ್ಪ, ೨೩ ವರ್ಷ, ಪೇಂಟಿAಗ್ ಕೆಲಸ, ಬೆಳಗುತ್ತಿ ಕ್ರಾಸ್ ಶಾಂತಿನಗರ ಶಾಲೆಯ
ಎದುರು, ನ್ಯಾಮತಿ, ದಾವಣಗೆರೆ.
೪. ಚಂದ್ರು ತಂದೆ ಪರಶುರಾಮಪ್ಪ, ೨೩ ವರ್ಷ, ತೆಂಗಿನಕಾಯಿ ವ್ಯಾಪಾರ, ಸುರಹೊನ್ನೆ ಶಾಂತಿನಗರ,
ನ್ಯಾಮತಿ, ದಾವಣಗೆರೆ
೫. ಮಂಜುನಾಥ್ ತಂದೆ ನಿಂಗಪ್ಪ, ೩೨ ವರ್ಷ, ಚಾಲಕ, ಸುರಹೊನ್ನೆ ಶಾಂತಿನಗರ, ನ್ಯಾಮತಿ, ದಾವಣಗೆರೆ.
೬. ಪರಮಾನಂದ ತಂದೆ ಚಿನ್ನಪ್ಪ, ೩೦ ವರ್ಷ, ಸಿಹಿ ತಿಂಡಿ ವ್ಯಾಪಾರ, ಸುರಹೊನ್ನೆ ಶಾಂತಿನಗರ, ನ್ಯಾಮತಿ,
ರವರುಗಳನ್ನು ಬಂಧಿಸಿ ೧೭.೦೧ ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿಚಾರಣೆ ವೇಳೆ ಕಂಡುಬಂದಂತಹ ಕುತೂಹಲಕಾರಿ ಅಂಶಗಳು
ಮೊದಲನೇ ಎ೧ ಆರೋಪಿ ವಿಜಯ್ಕುಮಾರ್ & ೨ನೇ ಆರೋಪಿ ಅಜಯ್
ಅಣ್ಣತಮ್ಮಂದಿರಾಗಿದ್ದು ಆರೋಪಿ-೬ ಪರಮಾನಂದ ಇವರುಗಳ ತಂಗಿಯ ಗಂಡನಾಗಿರುತ್ತಾನೆ.
ಇನ್ನುಳಿದ ಅಭಿ,ü ಮಂಜು, ಚಂದ್ರು, ನ್ಯಾಮತಿಯ ಬಳಿ ಸುರಹೊನ್ನೆಯವರಾಗಿರುತ್ತಾರೆ.
ವಿಜಯಕುಮಾರ್ನು ನ್ಯಾಮತಿ ಪಟ್ಟಣದಲ್ಲಿ ವಿಐಪಿ ಸ್ನಾಕ್ಸ್ ಹೆಸರಿನ ಬೇಕರಿ ಮತ್ತು ಸ್ವೀಟ್ಸ್
ಅಂಗಡಿಯನ್ನು ಅವನ ತಂದೆಯೊAದಿಗೆ ಸುಮಾರು ೨೫-೩೦ ವರ್ಷಗಳಿಂದ ನಡೆಸಿಕೊಂಡು ಬಂದಿದ್ದು,
ಅದರಲ್ಲಿ ಹೆಚ್ಚು ಲಾಭಗಳನ್ನು ಗಳಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅವನ ವ್ಯಾಪಾರದಲ್ಲಿ ಅಭಿವೃದ್ದಿ
ಪಡಿಸಲು ಸುಮಾರು ೧೫ ಲಕ್ಷ ರೂಪಾಯಿಗಳ ಸಾಲಕ್ಕಾಗಿ ಅವನು ಮಾರ್ಚ್ ೨೦೨೩ರಲ್ಲಿ ನ್ಯಾಮತಿಯ
ಎಸ್ಬಿಐ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದು,್ದ ಕ್ರೆಡಿಟ್ ಸ್ಕೋರ್ ಸರಿಯಾಗಿ ಇಲ್ಲದಿದ್ದರಿಂದ ಅವನ ಅರ್ಜಿ
ತಿರಸ್ಕೃತಗೊಂಡಿದ್ದು ನಂತರ ಅವನು ತಮ್ಮ ಸಂಬAಧಿಕರ ಹೆಸರಿನಲ್ಲಿ ಸಾಲಕ್ಕಾಗಿ ಮತ್ತೆ ಅದೇ ಎಸ್ ಬಿ
ಐ ನ್ಯಾಮತಿ ಬ್ರಾಂಚ್ನಲ್ಲಿ ಅರ್ಜಿ ಸಲ್ಲಿಸಿಕೊಳ್ಳುತ್ತಾನೆ. ಆಗಲು ಸಹ ಸದರಿ ಅರ್ಜಿಗಳು
ತಿರಸ್ಕೃತಗೊಳ್ಳುತ್ತವೆ.
ಆರೋಪಿ ವಿಜಯ ಹೇಳಿಕೆಯಂತೆ ಬ್ಯಾಂಕ್ ನವರು ಸರಿಯಾಗಿ ಸ್ಪಂದಿಸುತ್ತಿಲ್ಲ, ಸರಿಯಾದ
ರೀತಿಯಲ್ಲಿ ನಡೆದುಕೊಳ್ಳುತ್ತಿರಲಿಲ್ಲ ಅವನನ್ನು ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದು ಇದರ ಬಗ್ಗೆ
ವಿಜಯಕುಮಾರ್ಗೆ ಬೇಜಾರು & ಬ್ಯಾಂಕ್ ನ ಬಗ್ಗೆ ಬಹಳ ದ್ವೇಷದ ಭಾವನೆ ಬೆಳೆದಿದ್ದು. ಈಗಾಗಲೇ
ಯೂಟ್ಯೂಬ್ನಲ್ಲಿ ಹಾಗೂ ವಿವಿಧ ಓಟಿಪಿ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಬ್ಯಾಂಕ್ ದರೋಡೆ, ಬ್ಯಾಂಕ್
ರಾಬರಿ ಹಾಗೂ ಬ್ಯಾಂಕ್ ಕಳ್ಳತನಕ್ಕೆ ಸಂಬAಧಿಸಿದAತೆ ಓeಣಜಿಟix ನ moಟಿeಥಿ heisಣ ಒಳಗೊಂಡAತೆ
ಅನೇಕ ಸರಣಿ ವಿಡಿಯೋಗಳನ್ನು ಸುಮಾರು ೬ ತಿಂಗಳು ಕಾಲ ನೋಡಿ ತಾನು ಒಂದು ಬ್ಯಾಂಕ್
ಕಳ್ಳತನ ಮಾಡಲು ಬೇಕಾಗುವಂತಹ ಎಲ್ಲಾ ಮಾಹಿತಿಗಳನ್ನು ಹಾಗೂ ಕೌಶಲ್ಯಗಳನ್ನು ಪದೇ ಪದೇ ಆ
ವಿಡಿಯೋಗಳನ್ನು ನೋಡಿ ಸಂಗ್ರಹಿಸಿ ಬ್ಯಾಂಕ್ ಕಳ್ಳತನ ಹೇಗೆ ಎಂದು ಮಾಡಬಹುದೆಂಬುವ ಬಗ್ಗೆ
೫
ಕರಗತ ಮಾಡಿಕೊಂಡಿದ್ದಾಗಿ ತಿಳಿಸಿರುತ್ತಾನೆ. ಕೃತ್ಯ ಎಸಗುವ ಸಂಬAಧ ಸುಮಾರು ಆರು ತಿಂಗಳಿAದ
ಅದಕ್ಕೆ ಬೇಕಾಗುವ ಎಲ್ಲಾ ವಿವಿಧ ಸಲಕರಣೆಗಳನ್ನು ಶಿವಮೊಗ್ಗದಿಂದ ಹಾಗೂ ನ್ಯಾಮತಿ ಪಟ್ಟಣದಿಂದ
ತಂದು ಸಂಗ್ರಹಿಸಿಕೊAಡಿದ್ದಾಗಿ ಹೇಳಿರುತ್ತಾನೆ.
ಪ್ರಕರಣ ಎಸಗುವ ೦೩ ತಿಂಗಳ ಹಿಂದೆ ವಿಜಯಕುಮಾರ್, ತನ್ನ ತಮ್ಮ (ಅಜಯ್), ಭಾಮೈದ
ಹಾಗೂ ಮೂರು ಜನ ಸ್ನೇಹಿತರನ್ನು ಕರೆದು ಸುರಹೊನ್ನೆ ಶಾಲೆಯ ಬಳಿ ಕೃತ್ಯಕ್ಕೆ ಸಂಬAಧಿಸಿದ ರೂಪು
ರೇಷಗಳ ಬಗ್ಗೆ ಪ್ಲಾನ್ ತಯಾರು ಮಾಡಿದ್ದನ್ನು ಚರ್ಚಿಸುತ್ತಾರೆ. ನಮ್ಮೆಲ್ಲರಿಗೂ ಸಮಾಜದಲ್ಲಿ ಒಳ್ಳೆಯ
ಸ್ಥಾನಮಾನ ಸಿಗಬೇಕು, ಒಳ್ಳೆಯ ಐಷಾರಾಮ ಜೀವನ ಮಾಡಲು ಹಣದ ಅವಶ್ಯಕತೆ ಬಹಳ
ಇರುವುದರಿಂದ ತಾನೊಂದು ಪ್ಲಾನ್ ಮಾಡಿದ್ದು, ಅದರಂತೆ ಬ್ಯಾಂಕ್ ದರೋಡೆ ಮಾಡಿದರೆ ಬೇಗ
ಶ್ರೀಮಂತರಾಗಬಹುದೆAದು ಅವರಿಗೆ ಮನವರಿಕೆ ಮಾಡಿಕೊಟ್ಟು ತನ್ನ ಪ್ಲಾನ್ ಬಗ್ಗೆ ತಿಳಿಸುತ್ತಾನೆ.
ಇನ್ನುಳಿದ ಕೆಲವರು ಉಳಿದ ಅವಶ್ಯಕ ವಸ್ತುಗಳಾದ ಮಂಕಿ ಕ್ಯಾಪ್, ಗ್ಲೌಸ್, ಬ್ಲಾಕ್ ಶರ್ಟ್ ಮತ್ತು
ಪ್ಯಾಂಟ್ ಗಳನ್ನು ಮಾರ್ಕೆಟ್ನಿಂದ ಕೊಂಡು ತರುತ್ತಾರೆ.
೧೫ ದಿನಗಳ ಹಿಂದೆಯೇ ವಿಜಯನು ಅಭಿಷೇಕನೊಂದಿಗೆ ಬ್ಯಾಂಕ್ ಕಳ್ಳತನ ಮಾಡುವ ಬಗ್ಗೆ
ನ್ಯಾಮತಿ ಎಸ್ ಬಿ ಐ ಬ್ಯಾಂಕ್ ಸುತ್ತ ಹೋಗಿ ಬ್ಯಾಂಕ್ ಕಳ್ಳತನ ಮಾಡಬೇಕು ಎಂದು ಅಭ್ಯಾಸ
ಮಾಡಿರುತ್ತಾನೆ. ಒಂದೊAದು ಸಣ್ಣ ವಿಷಯಕ್ಕೂ ತುಂಬಾ ಅಚ್ಚುಕಟ್ಟಾಗಿ ತಯಾರಾಗುತ್ತಾರೆ. ರಾತ್ರಿ
ವೇಳೆಯಲ್ಲಿಯೂ ಬಂದು ಎಲ್ಲಾ ರೀತಿಯ ವೀಕ್ಷಣೆ ಯಾವಯಾವಗ
ಇತ್ತು ಯರ್ಯಾರ ಚಲವಲನಗಳು ಇತ್ತೆಂದು ತುಂಬಾ ದಿನ ಗಮನಿಸಿರುತ್ತಾರೆ.
ಮಾಡಿರುತ್ತಾರೆ.
ಕಳವು ಮಾಲು ಬಿಚ್ಚಿಟ್ಟು ವಿಲೆಗೆ ಪ್ರಯತ್ನ
❖ ಕದ್ದು ತಂದಂತಹ ಚಿನ್ನವನ್ನು ವಿಜಯಕುಮಾರನು ತನ್ನ ಮನೆಯಲ್ಲಿದ್ದಂತಹ ಸಿಲ್ವರ್ ಕಲರ್ ಡಸ್ಟರ್
ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದು ಅದನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಪ್ರತ್ತೇಕವಾದ
ಪ್ಲಾನ್ ಮಾಡುತ್ತಾನೆ.
❖ ಕೃತ್ಯಕ್ಕೆ ಬಳಸಿದ ವಸ್ತುಗಳಾದ ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್ಗಳನ್ನು ನಾಶಪಡಿಸಿದ್ದು, ಇನ್ನುಳಿದ
ಹೈಡ್ರಾಲಿಕ್ ಕಟ್ರ್, ಗ್ಯಾಸ್ ಸಿಲೆಂಡರ್ ಇತರ ವಸ್ತುಗಳನ್ನು ಸವಳಂಗ ಕೆರೆಗೆ ಎಸೆದಿರುವುದಾಗಿ
ತಿಳಿಸಿರುತ್ತಾನೆ.
❖ ಎಸ್.ಬಿ.ಐ. ಬ್ಯಾಂಕ್ ನಿಂದ ತಂದಿದ್ದAತಹ ಹಾರ್ಡ್ ಡಿಸ್ಕ್, ಡಿವಿಆರ್ನ್ನು ಮೊದಲು ಕಲ್ಲಿನಿಂದ ಜಜ್ಜಿ
ಹಾಳು ಮಾಡಿ ನಂತರ ಕೆರೆಗೆ ಎಸೆದಿರುತ್ತಾರೆ.
❖ ನಂತರ ನವೆಂಬರ್ ಮೊದಲನೆ ವಾರದಲ್ಲಿ ವಿಜಯ ತನ್ನ ಸ್ವಂತ ಊರಾದ ತಮಿಳುನಾಡಿನ ಮಧುರೈ ನ
ಮನೆಗೆ ವಿಜಯ ಒಬ್ಬನೇ ತನ್ನ ಡಸ್ಟರ್ ಕಾರಿನಲ್ಲಿ ತಲುಪಿ, ಮನೆಯು ಊರಿನ ಹೊರಗಡೆ ನಿರ್ಜನ
ಪ್ರದೇಶದಲ್ಲಿದ್ದು ಸುತ್ತಲೂ ದಟ್ಟ ಅರಣ್ಯವಿರುತ್ತದೆ. ಅಲ್ಲಿದ್ದಂತಹ ಸುಮಾರು ೨೫-೩೦ ಅಡಿ ಆಳವಿರುವ
೬
ಬಾವಿಯಲ್ಲಿ ಒಂದು ಸಣ್ಣ ಲಾಕರ್ಗೆ ಚಿನ್ನವನ್ನು ತುಂಬಿ ಅದಕ್ಕೆ ಹಗ್ಗ ಕಟ್ಟಿ ಆ ಬಾವಿಯಲ್ಲಿ ಯಾರಿಗೂ
ಗೊತ್ತಾಗದ ರೀತಿಯಲ್ಲಿ ಬಚ್ಚಿಟ್ಟಿರುತ್ತಾನೆ. ಈ ವಿಷಯವನ್ನು ಯಾರಿಗೂ ಹೇಳಿರುವುದಿಲ್ಲ.
❖ ಆ ಚಿನ್ನದಲ್ಲಿ ಸ್ವಲ್ಪ ಭಾಗ ತೆಗೆದುಕೊಂಡು ಬ್ಯಾಂಕ್ಗಳಲ್ಲಿ ಮತ್ತು ಚಿನ್ನದ ಅಂಗಡಿಗಳಲ್ಲಿ ಅವನ ಹಾಗೂ
ಅವನ ಸಂಬಂಧಿಕರ ಹೆಸರಿನಲ್ಲಿ ಅಡವಿಟ್ಟು ಹಣವನ್ನು ಪಡೆಯುತ್ತಾರೆ. ಆ ಹಣದಿಂದ ಸ್ವಲ್ಪ ಹಣವನ್ನು
ಅಭಿ, ಚಂದ್ರು, ಮಂಜುಗೆ ತಲಾ ೧ ಲಕ್ಷ ತಂದುಕೊಟ್ಟು ಊರಿನಲ್ಲಿ ಒಂದು ದೊಡ್ಡ ಮನೆ ಕಟ್ಟಿಸಿದ್ದು,
ಕೆಲವು ನಿವೇಶನಗಳನ್ನು ಖರೀದಿ ಮಾಡಿದ್ದು, ತಮ್ಮ ಸಂಬAಧಿ ಯಾದವರಿಗೆ ಸ್ವಲ್ಪ ಚಿನ್ನವನ್ನು
ಕೊಟ್ಟಿರುವುದಾಗಿ ತಿಳಿಸಿರುತ್ತಾರೆ.
❖ ಉಳಿದ ಚಿನ್ನವನ್ನು ೦೨ ರಿಂದ ೦೩ ವರ್ಷಗಳ ವರೆಗೆ ತೆಗೆಯಬಾರದೆಂದು, ಪೊಲೀಸರು ಆ ಪ್ರಕರಣದ
ತನಿಖೆ ಅಥವಾ ವಿಚಾರಣೆಯನ್ನು ನಿಲ್ಲಿಸಿದಾಗ ಈ ಚಿನ್ನವನ್ನು ಹೊರತೆಗೆಯುವುದೆಂದು
ಯೋಜಿಸಿರುತ್ತಾರೆ.
ತಂಡದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂಧಿಗಳು ವಿವರ
ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್, ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ. ಶ್ರೀ
ವಿಜಯಕುಮಾರ್ ಎಂ ಸಂತೋಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು (೧) & ಶ್ರೀ ಜಿ.
ಮಂಜುನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (೨) ದಾವಣಗೆರೆ ಜಿಲ್ಲೆರವರ
ಮಾರ್ಗದರ್ಶನದಲ್ಲಿ
ಶ್ರೀ ಸ್ಯಾಮ್ ವರ್ಗೀಸ್, ಎಎಸ್ಪಿ, ಚನ್ನಗಿರಿ ಉಪ ವಿಭಾಗ ತನಿಖಾಧಿಕಾರಿ,
ಶ್ರೀ ಬಸವರಾಜ್ ಬಿಎಸ್, ಡಿವೈಎಸ್ಪಿ, ಗ್ರಾಮಾಂತರ ಉಪವಿಭಾಗರವರು ಸಹಾಯಕ
ತನಿಖಾಧಿಕಾರಿಯಾಗಿ ಇವರರುಗಳನ್ನು ಒಳಗೊಂಡAತೆ ತಂಡದಲ್ಲಿ
ಶ್ರೀ ರವಿ ಎನ್ ಎಸ್ ಪಿಐ, ನ್ಯಾಮತಿ ಠಾಣೆ,
ಶ್ರೀ ಸುನಿಲ್ ಹುಲ್ಮನಿ ಪಿಐ, ಹೊನ್ನಾಳಿ ಠಾಣೆ,
ಶ್ರೀ ಲಿಂಗನಗೌಡ ನೆಗಳೂರು - ಸಿಪಿಐ, ಸಂತೆಬೆನ್ನೂರು,
ಶ್ರೀ ದೇವಾನಂದ್ ಪಿಐ, ಹರಿಹರ ನಗರ ಠಾಣೆ,
ಶ್ರೀ ಸುರೇಶ್ ಸಗರಿ, ಸಿಪಿಐ, ಹರಿಹರ,
ಶ್ರೀ ಮಂಜುನಾಥ ಕುಪ್ಪೆಲೂರು, ಪಿಎಸ್ಐ, ಹರಿಹರ ಗ್ರಾ ಠಾಣೆ,
ಶ್ರೀ ಸಂಜೀವ್ಕುಮಾರ್ ಪಿಎಸ್ಐ, ಹೊನ್ನಾಳಿ ಠಾಣೆ,
ಶ್ರೀ ಸಾಗರ್ ಅತ್ತಾರ್ವಾಲ್, ಪಿಎಸ್ಐ, ಕೆಟಿಜೆ ನಗರ ಠಾಣೆ,
ಶ್ರೀ ರವಿನಾಯ್ಕ್ ಲಂಬಾಣಿ, ಪಿಎಸ್ಐ, ಗಾಂಧಿನಗರ ಠಾಣೆ,
ಶ್ರೀ ಹರೋನ್ ಅಕ್ತರ್ ಪಿಎಸ್ಐ, ದಾವಣಗೆರೆ ಗ್ರಾ, ಠಾಣೆ,
ಶ್ರೀ ಮಹದೇವ ಭತ್ತೆ, ಪಿಎಸ್ಐ-೨, ಹರಿಹರ ಗ್ರಾ ಠಾಣೆ,
ಶ್ರೀ ಶ್ರೀಪತಿ ಗಿನ್ನಿ, ಪಿಎಸ್ಐ, ಹರಿಹರ ನಗರ ಠಾಣೆ,
ಶ್ರೀ ಗಾಧಿಲಿಂಗಪ್ಪ, ಪಿಎಸ್ಐ, ಜಗಳೂರು ಠಾಣೆ,
ಶ್ರೀ ಜಗದೀಶ್, ಪಿಎಸ್ಐ, ಸಂತೆಬೆನ್ನೂರು,
ಶ್ರೀ ಅಬ್ದುಲ್ ಖಾದರ್ ಜಿಲಾನಿ, ಪಿಎಸ್ಐ, ದಾವಣಗೆರೆ ಗ್ರಾ,,
ಶ್ರೀ ಜೋವಿತ್ ರಾಜ್, ಪಿಎಸ್ಐ, ದಾವಣಗೆರ ಗ್ರಾ ಠಾಣೆ,
ಶ್ರೀ ಜಯ್ಯಪ್ಪ ನಾಯ್ಕ್, ಪಿಎಸ್ಐ ಚನ್ನಗಿರಿ,
ಶ್ರೀ ಸೈಫೂದ್ದೀನ್, ಪಿಎಸ್ಐ, ಹೊನ್ನಾಳಿ
ಶ್ರೀ ಮಜೀದ್, ಸಿಹೆಚ್ಸಿ, ಡಿಸಿಐಬಿ,
ಶ್ರೀ ರಾಘವೇಂದ್ರ ಸಿಹೆಚ್ಸಿ, ಡಿಸಿಐಬಿ,
೭
ಶ್ರೀ ಆಂಜನೇಯ ಸಿಹೆಚ್ಸಿ, ಡಿಸಿಐಬಿ,
ಶ್ರೀ ಬಾಲಾಜಿ ಸಿಪಿಸಿ, ಡಿಸಿಐಬಿ,
ಶ್ರೀ ರಮೇಶ್ ನಾಯ್ಕ್ ಸಿಹೆಚ್ಸಿ, ಡಿಸಿಐಬಿ,
ಶ್ರೀ ಶಿವರಾಜ್ ಸಿಪಿಸಿ ನ್ಯಾಮತಿ ಠಾಣೆ,
ಶ್ರೀ ಶಿವರಾಜ್, ಸಿಪಿಸಿ, ಕೆಟಿಜೆ ನಗರ ಠಾಣೆ,
ಶ್ರೀ ಮಲ್ಲಿಕಾರ್ಜುನ್ ಸಿಹೆಚ್ಸಿ, ವಿದ್ಯಾನಗರ ಠಾಣೆ,
ಶ್ರೀ ಆನಂದ, ಸಿಪಿಸಿ ನ್ಯಾಮತಿ ಠಾಣೆ,
ಶ್ರೀ ಮಾರುತಿ, ಸಿಹೆಚ್ಸಿ, ಗಾಂಧಿನಗರ ಠಾಣೆ,
ಶ್ರೀ ಸತೀಶ್ ಸಿಹೆಚ್ಸಿ, ಕೆಟಿಜೆ ನಗರ ಠಾಣೆ,
ಶ್ರೀ ಮಹೇಶ್ ನಾಯ್ಕ್, ಸಿಪಿಸಿ, ನ್ಯಾಮತಿ ಠಾಣೆ,
ಶ್ರೀ ವೀರಭದ್ರಪ್ಪ, ಸಿಹೆಚ್ಸಿ, ಸಂತೆಬೆನ್ನೂರು ಠಾಣೆ,
ಶ್ರೀ ರುದ್ರೇಶ್, ಸಿಹೆಚ್ಸಿ, ಸಂತೆಬೆನ್ನೂರು ವೃತ್ತ ಕಛೇರಿ,
ಶ್ರೀ ಇಬ್ರಾಹಿಂ, ಸಿಪಿಸಿ, ಬಸವಪಟ್ಟಣ,
ಶ್ರೀ ಆಣ್ಣಪ್ಪ, ಸಿಹೆಚ್ಸಿ, ದಾವಣಗೆರೆ ಗ್ರಾ, ಠಾಣೆ,
ಶ್ರೀ ಯುಸಫ್, ಸಿಪಿಸಿ, ದಾವಣಗೆರೆ ಗ್ರಾ, ಠಾಣೆ,
ಶ್ರೀ ರವಿ, ಸಿಪಿಸಿ ಹರಿಹರ ನಗರ,
ಶ್ರೀ ಸಿದ್ದೇಶ್, ಹರಿಹರ ನಗರ,
ಶ್ರೀ ಯೋಗೀಶ್ ನಾಯ್ಕ್ ಸಿಪಿಸಿ, ವಿದ್ಯಾನಗರ ಠಾಣೆ,
ಶ್ರೀ ಗಿರೀಶ್, ಸಿಪಿಸಿ, ಕೆಟಿಜೆ ನಗರ ಠಾಣೆ,
ಶ್ರೀ ಶಾಂತರಾಜ್ ಸಿಪಿಸಿ, ಹರಿಹರ ನಗರ
ತಾಂತ್ರಿಕ ಸಹಾಯಕರಾಗಿ ಶ್ರೀ ರಮೇಶ್ ಎಂ ಪಿ, ಎಪಿಸಿ, ಸಿಡಿಆರ್ ವಿಭಾಗ,
ಶ್ರೀ ರಾಮಚಂದ್ರ ಬಿ ಜಾಧವ್ ಸಿಹೆಚ್ಸಿ,
ಶ್ರೀ ರಾಘವೇಂದ್ರ ಕೆ,ಕೆ ಸಿಹೆಚ್ಸಿ
ಶ್ರೀ ಅರುಣಕುಮಾರ್ ಹೆಚ್ ವಿ, ಸಿಪಿಸಿ, ಡಿಪಿಓ
ಶ್ರೀ ಪ್ರಶಾಂತ್ಕುಮಾರ್ ಎಂ ಹೆಚ್, ಡಿಪಿಓ
ತನಿಖಾ ಸಹಾಯಕರಾಗಿ ಶ್ರೀ ಪಾಲಾನಾಯ್ಕ್, ಸಿಹೆಚ್ಸಿ, ಚನ್ನಗಿರಿ ಉಪ ವಿಭಾಗ,
ಶ್ರೀ ಮಲ್ಲೇಶ್ ಸಿಹೆಚ್ಸಿ, ನ್ಯಾಮತಿ ಠಾಣೆ,
ಶ್ರೀ ದೇವರಾಜ್ ಸಿಪಿಸಿ, ನ್ಯಾಮತಿ
ಶ್ರೀ ರಾಘು, ಶ್ರೀ ಚನ್ನೇಶ & ಶ್ರೀ ಅಸ್ಗರ್ ವಾಹನ ಚಾಲಕರು ಈ ಮೇಲ್ಕಂಡ ಅಧಿಕಾರಿ &
ಸಿಬ್ಬಂದಿಗಳು ನ್ಯಾಮತಿ ಬ್ಯಾಂಕ್ ಕಳ್ಳತನ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.
ಮಾನ್ಯ ಗೃಹ ಮಂತ್ರಿಗಳಿಂದ ತಂಡಕ್ಕೆ ಬಹುಮಾನ ಮತ್ತು ೧೦ ಜನರಿಗೆ ಮುಖ್ಯಮಂತ್ರಿಗಳ ಚಿನ್ನದ
ಪದಕ
ಮಾನ್ಯ ಗೃಹ ಮಂತ್ರಿಗಳು ಸದರಿ ಕಾರ್ಯವನ್ನು ಶ್ಲಾಘಿಸಿ ಈ ತಂಡದಲ್ಲಿ ಕೆಲಸ
ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಹತ್ತು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ
ಮುಖ್ಯಮಂತ್ರಿಗಳ ಪದಕಗಳನ್ನು ಘೋಷಿಸಿರುತ್ತಾರೆ
ಡಿಜಿ ಮತ್ತು ಐಜಿಪಿ ರವರಿಂದ ಬಹುಮಾನ ಮತ್ತು ಪ್ರಶಂಸೆ
ಮಾನ್ಯ ಡಿಜಿ ಮತ್ತು ಐಜಿಪಿ ರವರು, ಎಡಿಜಿಪಿ ಕಾ & ಸು ಹಾಗೂ ಅಪರಾಧ ಮತ್ತು
ತಾಂತ್ರಿಕ ಸೇವೆಗಳು ರವರು ಕಾರ್ಯವನ್ನು ಶ್ಲಾಘಿಸಿ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.