ಮೋದಿ ಹಾಗು ಫಡ್ನವಿಸ್ ಅವರ ಡಬಲ್ ಎಂಜಿನ್ ಸರ್ಕಾರಗಳು ಅನುಸರಿಸಿದ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ ಹಾಗು ಸಾಂಸ್ಕೃತಿಕ ಪುನರುತ್ಥಾನದ ರಾಜಕಾರಣಕ್ಕೆ ಜನರಿಂದ ದೊರೆತಿರುವುದು ಸ್ಪಷ್ಟವಾದ ಹಾಗು ಸಕಾರಾತ್ಮಕ ಆದೇಶ”;ಮುಂಬೈ ಚುನಾವಣೆಯ ಕುರಿತು ವಿಜಯೇಂದ್ರ ಅವರ ಪ್ರತಿಕ್ರಿಯೆ

Banglore:

Font size:

ಮುಂಬೈ ಚುನಾವಣೆಯ ಕುರಿತು ವಿಜಯೇಂದ್ರ ಅವರ ಪ್ರತಿಕ್ರಿಯೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರು ಹಾಗು ಶಾಸಕರಾದ ಶ್ರೀ ಬಿ. ವೈ. ವಿಜಯೇಂದ್ರ ಅವರ ಹೇಳಿಕೆ “ಮೋದಿ ಹಾಗು ಫಡ್ನವಿಸ್ ಅವರ ಡಬಲ್ ಎಂಜಿನ್ ಸರ್ಕಾರಗಳು ಅನುಸರಿಸಿದ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ ಹಾಗು ಸಾಂಸ್ಕೃತಿಕ ಪುನರುತ್ಥಾನದ ರಾಜಕಾರಣಕ್ಕೆ ಜನರಿಂದ ದೊರೆತಿರುವುದು ಸ್ಪಷ್ಟವಾದ ಹಾಗು ಸಕಾರಾತ್ಮಕ ಆದೇಶ”;ಮುಂಬೈ ಚುನಾವಣೆಯ ಕುರಿತು ವಿಜಯೇಂದ್ರ ಅವರ ಪ್ರತಿಕ್ರಿಯೆ

ಬೆಂಗಳೂರು, ಜನವರಿ 16:
ಮಹಾರಾಷ್ಟ್ರ ರಾಜ್ಯದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲದೆ ರಾಜ್ಯದಾದ್ಯಂತ ನಡೆದ ನಗರ ಹಾಗು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲಭಿಸಿರುವ ಗಮನಾರ್ಹ ಫಲಿತಾಂಶಗಳನ್ನು ಅವಲೋಕಿಸಿದಾಗ, ಮಹಾರಾಷ್ಟ್ರದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತಿ ಕೆಳ ಹಂತದಲ್ಲಿರುವ ಜನರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಹಾಗು ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದ ಡಬಲ್ ಎಂಜಿನ್ ಸರ್ಕಾರಗಳು ಮುನ್ನಡೆಸಿದ ಅಭಿವೃದ್ಧಿಯ, ಆರ್ಥಿಕ ಬೆಳವಣಿಗೆಯ ರಾಜಕಾರಣ ಹಾಗು ಸಾಂಸ್ಕೃತಿಕ ಪುನರುಜ್ಜೀವನದ ರಾಜಕಾರಣಕ್ಕೆ ಘೋಷಣಾತ್ಮಕವಾದ “ಸ್ಪಷ್ಟ ಹೋಕಾರ" ಕೊಟ್ಟಿರುವುದು ಗೋಚರಿಸುತ್ತದೆ.

ಮಹಾರಾಷ್ಟ್ರದ ಸಾಮಾನ್ಯ ಜನತೆ, ಐ.ಎನ್.ಡಿ.ಐ. ಮೈತ್ರಿಕೂಟದ ಪಾಲುದಾರರು ಅನುಸರಿಸುತ್ತಿರುವ ನಕಾರಾತ್ಮಕ, ಕಪಟ ಧರ್ಮನಿರಪೇಕ್ಷತೆಯ ರಾಜಕಾರಣ ಹಾಗು ದ್ವೇಷ ಮತ್ತು ವಿಭಜನೆಯ ರಾಜಕಾರಣಕ್ಕೆ ಸ್ಪಷ್ಟ ಹಾಗು ದೃಢವಾದ ನಿರಾಕರಣೆ ನೀಡಿದ್ದಾರೆ. ಈ ಚುನಾವಣಾ ಫಲಿತಾಂಶಗಳು, ಜನರು ಅಭಿವೃದ್ಧಿ ವಿರೋಧಿ ಹಾಗೂ ಸಮಾಜವನ್ನು ವಿಭಜಿಸುವ ರಾಜಕಾರಣವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.
ಈ ಫಲಿತಾಂಶಗಳು, ಸ್ವಯಂಘೋಷಿತ ಎರಡು ಶಿವಸೇನಾ ಗುಂಪುಗಳು, ಕಾಂಗ್ರೆಸ್ ಹಾಗು ಎನ್‌ಸಿಪಿ ಪಕ್ಷಗಳಿಗೆ ಜನರು ನೀಡಿರುವ ತೀವ್ರ ಸಂದೇಶವಾಗಿದ್ದು, ಅವರ ರಾಜಕೀಯ ದಿಕ್ಕಿನ ಕುರಿತು ಗಂಭೀರ ಆತ್ಮಾವಲೋಕನಕ್ಕೆ ಆಹ್ವಾನವಾಗಿದೆ. ರಾಜಕೀಯ ಪರಿಸ್ಥಿತಿಯ "ಗೋಡೆಯ ಮೇಲಿನ ಬರಹ" ಈಗ ಸ್ಪಷ್ಟವಾಗಿದೆ — ಪವಾರ್‌ಗಳು ಹಾಗು ಠಾಕ್ರೆ ಕುಟುಂಬಗಳ ಪ್ರಭಾವಶಾಲಿ ರಾಜಕಾರಣಕ್ಕೆ ಜನರು ತೆರೆ ಎಳೆದಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಭವಿಷ್ಯವು ಈಗ ರಾಷ್ಟ್ರದ ಏಕತೆ, ಅಭಿವೃದ್ಧಿ, ಆರ್ಥಿಕ ಪ್ರಗತಿ ಹಾಗು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಬದ್ಧವಾಗಿರುವ ರಾಷ್ಟ್ರವಾದಿ ಶಕ್ತಿಗಳ ಕೈಯಲ್ಲಿದೆ ಎಂಬುದು ಈ ಫಲಿತಾಂಶಗಳಿಂದ ನಿರ್ವಿವಾದವಾಗಿ ಸಾಬೀತಾಗಿದೆ.

ಒಂದು ಅರ್ಥದಲ್ಲಿ, ಬೃಹನ್ ಮುಂಬೈ ಮಹಾನಗರ ಪಾಲಿಕೆ ಹಾಗು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ಅನೇಕ ಸತ್ಯಗಳನ್ನು ಮರುಸ್ಥಾಪಿಸುವುದರ ಜೊತೆಗೆ, ಹಲವಾರು ರಾಜಕೀಯ ಮಿಥ್ಯೆಗಳನ್ನೂ ಸಂಪೂರ್ಣವಾಗಿ ಭಗ್ನಗೊಳಿಸಿವೆ. ಇದರೊಂದಿಗೆ, ಈ ಫಲಿತಾಂಶಗಳು ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ದಾಖಲೆ ನಿರ್ಮಾಣವಾಗಲು ಸಹ ಕಾರಣವಾಗಿವೆ.

ಮೊದಲನೆಯದಾಗಿ, ಮುಂಬೈನ ಚಾಣಾಕ್ಷ ಮತದಾರರು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರು ಸ್ಥಾಪಿಸಿ ಬೆಳೆಸಿದ ನಿಜವಾದ ಹಾಗು ಯಥಾರ್ಥ ಶಿವಸೇನೆಯು ಏಕನಾಥ್ ಶಿಂದೆ ಅವರ ನೇತೃತ್ವದಲ್ಲಿರುವ ಶಿವಸೇನೆಯೇ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ. ಏಕನಾಥ್ ಶಿಂದೆ ಅವರು ಬಾಳಾಸಾಹೇಬ್ ಠಾಕ್ರೆಯವರ ನಿಜವಾದ ರಾಜಕೀಯ ಉತ್ತರಾಧಿಕಾರಿಯೇ ಎಂಬುದು ಯಾವುದೇ ಸಂಶಯಕ್ಕೂ ಅವಕಾಶವಿಲ್ಲದಂತೆ ದೃಢಪಟ್ಟಿದೆ. ಇದೇ ಸಂದರ್ಭದಲ್ಲಿ, ಕೇವಲ ಹೆಸರಿನ ಮಟ್ಟಿಗೆ ಮಾತ್ರ ಠಾಕ್ರೆ ಎಂಬ ರಾಜಕೀಯ ಪರಂಪರೆಯನ್ನು ಹೇಳಿಕೊಳ್ಳುತ್ತಿರುವ ಇಬ್ಬರು “ಠಾಕ್ರೆ”ಗಳನ್ನು ಮಹಾರಾಷ್ಟ್ರದ ರಾಜಕೀಯದಲ್ಲಿ ಅವರ ನಿಜವಾದ ಸ್ಥಾನವನ್ನು ಜನತೆ ತೋರಿಸಿರುವುದು ಈ ಫಲಿತಾಂಶಗಳ ಮತ್ತೊಂದು ಮಹತ್ವದ ಸಂದೇಶವಾಗಿದೆ.

ಎರಡನೆಯದಾಗಿ, ಮಹಾರಾಷ್ಟ್ರದ ಪಕ್ವಗೊಂಡ ಮತದಾರರು ಚುನಾವಣಾ ಪ್ರಚಾರದ ವೇಳೆ ಸಾಮಾನ್ಯವಾಗಿ ತಮಿಳು ಸಮುದಾಯದ ವಿರುದ್ಧ ಹಾಗು ವಿಶೇಷವಾಗಿ ಬಿಜೆಪಿ ನಾಯಕ ಅಣ್ಣಾಮಲೈ ಅವರ ವಿರುದ್ಧ ಅಸಭ್ಯ ಹಾಗು ರುಚಿಸದ ಹೇಳಿಕೆಗಳನ್ನು ನೀಡಿದ್ದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಘೋಷಣಾತ್ಮಕವಾದ ಕಪಾಳಮೋಕ್ಷ ನೀಡಿದ್ದಾರೆ.
ಈ ಚುನಾವಣಾ ಫಲಿತಾಂಶಗಳ ಮೂಲಕ, ರಾಜ್ ಠಾಕ್ರೆಯನ್ನು ರಾಜಕೀಯ ಇತಿಹಾಸದ ಕಸದ ಬುಟ್ಟಿಗೆ ಶಾಶ್ವತವಾಗಿ ಎಸೆಯಲಾಗಿದೆ — ಸಂಪೂರ್ಣವಾಗಿ, ಯಾವುದೇ ಉಳಿವಿಗೆ ಅವಕಾಶವಿಲ್ಲದಂತೆ (lock, stock and barrel).

ಮೂರನೆಯದಾಗಿ, ಒಂದು ಅದ್ಭುತ ದಾಖಲೆ ಎಂಬಂತೆ, ಮುಂಬೈನ ಜಾಗೃತ ಮತದಾರರು ಬಿಜೆಪಿಗೆ ಭಾರೀ ಆದೇಶವನ್ನು ನೀಡಿದ್ದಾರೆ. ಇದರ ಫಲವಾಗಿ, ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಆಡಳಿತ ಪಕ್ಷವಾಗಿ ಹೊರಹೊಮ್ಮಿರುವುದು ಮಹತ್ವದ ರಾಜಕೀಯ ಮೈಲಿಗಲ್ಲಾಗಿದೆ.

Prev Post ದ್ವೇಷ ಭಾಷಣ ಮಸೂದೆ ಜನರನ್ನು ಭಯಗೊಳಿಸುತ್ತದೆ: ಹೊದಿಗೆರೆ ಆಕ್ಷೇಪ.