ರಾಹುಲ್ ಗಾಂಧಿಯವರಿಗೆ ಸ್ಪಷ್ಟತೆ ಇಲ್ಲ, ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ನನ್ನ ಓದಿ ಹೋಗಿದ್ದಾರೆ ;ನಿಖಿಲ್ ಕುಮಾರಸ್ವಾಮಿ ರಾಜಣ್ಣ ಕಾಂಗ್ರೆಸ್ ಪಕ್ಷದ ಹಿರಿಯರು, ಅವರನ್ನ ವಜಾಗೊಳಿಸಿ ಮುಜುಗುರಕ್ಕೀಡು ಮಾಡಿ ಗೌರವಕ್ಕೆ ಧಕ್ಕೆ ಮಾಡಿದ್ದಾರೆ;

Davanagere:

Font size:

|ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಗಟ್ಟಿಯಾಗಿ ಮುಂದುವರಿಯುತ್ತೆ

ದಾವಣಗೆರೆ,ಹರಿಹರ: ವಾಸ್ತವ ಸ್ಥಿತಿಯನ್ನ ಮುಂದಿಟ್ಟು ರಾಜಣ್ಣ ಹೇಳಿದ್ದಾರೆ. ಅವರು ಹೇಳಿರುವುದಲ್ಲಿ ತಪ್ಪೇನಿದೆ.?
ಅವರನ್ನು ಸಂಪುಟದಿಂದ ಏಕಾಏಕಿ ವಜಾ ಮಾಡಿದ್ದಾರೆ. ಅವರ ಹಿರಿತನಕ್ಕೆ ಕಾಂಗ್ರೆಸ್ ಪಕ್ಷ ಬೆಲೆ ಕೊಟ್ಟು ನಡೆಸಿಕೊಳ್ಳಬೇಕಿತ್ತು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿಯವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ವಾಸ್ತವ ಸ್ಥಿತಿಯನ್ನ ಮುಂದಿಟ್ಟು ರಾಜಣ್ಣ ಅವರು ಹೇಳಿದ್ದಾರೆ.ವಿಧಾನಸಭೆ ಚುನಾವಣೆ ವೇಳೆ 136 ಕ್ಷೇತ್ರ ಗೆದ್ದಿದ್ರು ಆಗ ರಾಹುಲ್ ಗಾಂಧಿ ಅವರು ಕೇಳಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸೀಟ್ ಬಂದಾಗ ಪ್ರಶ್ನೆ ಮಾಡ್ತಿದ್ದಾರೆ. ರಾಹುಲ್ ಗಾಂಧಿಯವರಿಗೆ ಸ್ಪಷ್ಟತೆ ಇಲ್ಲ, ರಾಜಣ್ಣರ ವಜಾ ಮಾಡಿದ್ರೆ ಏನಾಗುತ್ತೆ.? ಎಂದು ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.

136 ಸ್ಥಾನ ಕಾಂಗ್ರೆಸ್ ಗೆದ್ದಾಗ ರಾಹುಲ್ ಗಾಂಧಿಗೆ ಸರಿ ಇತ್ತಾ.? ಸಂಸತ್ ಚುನಾವಣೆಯಲ್ಲಿ ಹಿನ್ನಡೆಯಾದಾಗ ಮತಗಳ್ಳತನದ ಬಗ್ಗೆ ಆರೋಪ ಮಾಡಿ ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ನನ್ನ ಓದಿ, ಘೋಷಣಾ ಪತ್ರಕ್ಕೆ ಸಹಿ ಹಾಕದೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ ಅನ್ನೋದು ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಇದೆಯೇ?

ಪ್ರಜಾಪ್ರಭುತ್ವ ಅನ್ನೋದು ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಇದೆಯೇ? ಕಾಂಗ್ರೆಸ್ ಕೇಂದ್ರದ ನಾಯಕರ ಬಗ್ಗೆ ಜನ ಚರ್ಚೆ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಆರೋಪಿತ ಮಂತ್ರಿಗಳ ವಜಾಗೊಳಿಸುವ ವಿಚಾರ ಬರಲಿಲ್ಲ. ರಾಜಣ್ಣ ಅವರು ಹೇಳಿದ ವಿಚಾರದಲ್ಲಿ ವಾಸ್ತವ ಸ್ಥಿತಿ ಮಾತನಾಡಿದ್ದಾರೆ ಎಂದು ಹೇಳಿದರು.

ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುವ ರಾಹುಲ್ ಗಾಂಧಿ ಅವರು ಪರಿಶಿಷ್ಟ ಸಮುದಾಯದವರಿಗೆ ಕೊಡುವ ಗೌರವ ಇದೇನಾ.? ರಾಜಣ್ಣ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು. ಅವರ ಹಿರಿತನಕ್ಕೆ ಕಾಂಗ್ರೆಸ್ ಬೆಲೆ ಕೊಟ್ಟು ನಡೆಸಿಕೊಳ್ಳಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಕೆ.ಎನ್.ರಾಜಣ್ಣ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು.ಗೌರವಿತವಾಗಿ ರಾಜೀನಾಮೆ ಕೇಳುವ ಪ್ರಕ್ರಿಯೆ ಮಾಡಬಹುದಿತ್ತು. ವಜಾಗೊಳಿಸಿ ಮುಜುಗುರಕ್ಕೀಡು ಮಾಡಿ ಅವರ ಗೌರವಕ್ಕೆ ಧಕ್ಕೆ ಮಾಡಿದ್ದಾರೆ. ಈ ಬಗ್ಗೆ ಪಕ್ಷಾತೀತವಾಗಿ ಚರ್ಚೆ ಆಗ್ತಿದೆ ಎಂದು ಹೇಳಿದರು.

ಪರಿಶಿಷ್ಟ ಸಮುದಾಯದ ರಾಜಣ್ಣಗೆ ಆಗಿರುವ ಮುಜುಗರ, ಅಗೌರವ ಇದನ್ನು ಕಾಂಗ್ರೆಸ್ ರಾಜ್ಯ ಕೇಂದ್ರ ನಾಯಕರು ಪ್ರಶ್ನೆ ಮಾಡಬೇಕು ಎಂದ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.

ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಗಟ್ಟಿಯಾಗಿ ಮುಂದುವರಿಯುತ್ತೆ

ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರಿಕೆಯಾಗುತ್ತೆ.
ಬದಲಾವಣೆ ವ್ಯಕ್ತಿತ್ವ ದೇವೇಗೌಡರ ಬಳಿ ಇಲ್ಲ. ಪ್ರಧಾನಿ ಮೋದಿ ಕಳೆದ 11 ವರ್ಷಗಳಲ್ಲಿ ನೀಡಿದ ಆಡಳಿತ ಮೆಚ್ಚಿ ಮೈತ್ರಿಯಾಗಿದೆ. ಬಿಬಿಎಂಪಿ ಸೇರಿ ಯಾವುದೇ ಚುನಾವಣೆ ಇರಲಿ ನಮ್ಮ ಮೈತ್ರಿ ಗಟ್ಟಿಯಾಗಿ ಮುಂದುವರಿಯುತ್ತೆ ಎಂದು ತಿಳಿಸಿದರು.

ಧರ್ಮಸ್ಥಳ ಅರಣ್ಯದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಮಾತನಾಡಿದ ಅವರು; ಅನಾಮಿಕ ದೂರಿನ ಮೇರೆಗೆ ಎಸ್‌ಐಟಿ ಸ್ಥಳ ಪರಿಶೀಲನೆ ಬಗ್ಗೆ ನೋಡ್ತಿದೀವಿ. ತನಿಖೆ ಬಳಿಕ ಔಟ್‌ಕಮ್ ಏನು ಬರುತ್ತೆ ಆಮೇಲೆ ಚರ್ಚೆ ಮಾಡಬಹದು. ಎಸ್‌ಐಟಿ ತನಿಖೆಯಲ್ಲಿ ಏನು ಸಿಕ್ಕಿದೆ ಗೊತ್ತಿಲ್ಲ. ಇದು ಸೂಕ್ಷ್ಮ ವಿಚಾರ, ತನಿಖೆ ಪೂರ್ಣಗೊಂಡ ಬಳಿಕ ಪ್ರತಿಕ್ರಿಯಿಸೋದು ಒಳ್ಳೆಯದು ಎಂದು ಹೇಳಿದರು.

ದಿ‌.ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು. ಡಾ. ವಿಷ್ಣುವರ್ಧನ್ ಅವರು ಕನ್ನಡದ ಮೇರುನಟ. ಇತ್ತೀಚಿನ ಬೆಳವಣಿಗೆ ಹೀಗೆ ಆಗಬಾರದಿತ್ತು. ಈ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ತಿಳಿಸಿದರು.

Prev Post ಮುಖ್ಯಮಂತ್ರಿಗಳಿಂದ ಸದನದಲ್ಲಿ ಉತ್ತರಕ್ಕೆ ಆಗ್ರಹ ರಾಜಣ್ಣ ಮಾಡಿದ ಘೋರ ಅಪರಾಧ ಏನು: ವಿಜಯೇಂದ್ರ
Next Post ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನವಾದ ಭೂಮಿಗೆ ಎರಡೆರಡು ಸಲ ಪರಿಹಾರ ತಪ್ಪಿತಸ್ಥ ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಹೆಚ್ಚುವರಿ ಹಣ ವಸೂಲು: ಎಂ ಬಿ ಪಾಟೀಲ