Font size:
ವೀರಶೈವ ಮಹಾಸಭಾದ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾಗಿ ಉಮೇಶ ಪಾಟೀಲ ನೇಮಕ
ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭೆಯ “ರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗ”ದ ಅಧ್ಯಕ್ಷರನ್ನಾಗಿ ಯುವ ಉದ್ಯಮಿ ಉಮೇಶ ಪಾಟೀಲ ಅವರನ್ನು ನೇಮಕ ಮಾಡಿ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಆದೇಶ ಹೊರಡಿಸಿದ್ದಾರೆ.
ಉಮೇಶ ಪಾಟೀಲ್ ಅವರಿಗೆ ಆದೇಶ ಪತ್ರ ನೀಡಿರುವ ಶಾಮನೂರು ಶಿವಶಂಕರಪ್ಪ, ತಮಗೆ ಹೃರ್ತೂವಕ ಅಭಿನಂದನೆಗಳು. ತಾವು ಕೂಡಲೇ ಮಹಾಸಭೆಯ ಗುರಿ ಮತ್ತು ಧೈಯೋದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದ್ದಾರೆ.