ರಾಜ್ಯದ ಮುಖ್ಯ ಕಾರ್ಯದರ್ಶಿಗಳನ್ನು‌ ಭೇಟಿ ಮಾಡಿದ ಭಾರತೀಯ ವಿದೇಶಿ ಸೇವೆಯ ಭಾರತೀಯ ರಾಯಭಾರಿ ಕಛೇರಿಗಳ ಅಧಿಕಾರಿಗಳು

Banglore:

Font size:

ರಾಜ್ಯದ ಮುಖ್ಯ ಕಾರ್ಯದರ್ಶಿಗಳನ್ನು‌ ಭೇಟಿ ಮಾಡಿದ ಭಾರತೀಯ ವಿದೇಶಿ ಸೇವೆಯ ಭಾರತೀಯ ರಾಯಭಾರಿ ಕಛೇರಿಗಳ ಅಧಿಕಾರಿಗಳು

ಬೆಂಗಳೂರು, ಮೇ 21, -

ಭಾರತೀಯ ವಿದೇಶಿ ಸೇವೆಯ (Indian Foreign Service) ಭಾರತೀಯ ರಾಯಭಾರಿ ಕಛೇರಿಗಳ ಅಧಿಕಾರಿಗಳಾದ ಇಸ್ರೇಲ್ ನವಿಶಾಲ್‌ ಜ್ಯೋತಿ ದಾಸ್, ಟೆಲ್ ಅವಿವ್, ಬೀಜಿಂಗ್ ನ ಡಾ.ಗೌತಮ್ ಕುಮಾರ್ ಪಾಂಡೆ, ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್‌ ಕಛೇರಿಯ ಅಜಿತ್ ಜಾನ್ ಜೋಶುವಾ, ಕುವೈತ್ ನ ಮನಸ್ ರಾಜ್ ಪಟೇಲ್ ಮತ್ತು
ಬೋಗೋಟ ನ ಡಾ.ವಿನೀತ್‌ಕುಮಾರ್ ಅವರು ಇಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದರು.

ಈ ಸಮಯದಲ್ಲಿ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕದ ಕಾಫಿ ಶ್ರೀಗಂಧದ ಸಾಮಗ್ರಿಗಳು, ಅರಣ್ಯ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳು ಮುಂತಾದ ಸ್ಥಳೀಯ ಉತ್ಪನ್ನಗಳ ರಪ್ತಿನ ಬಗ್ಗೆ ಚರ್ಚಿಸಿ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಒದಗಿಸುವ ಆಶಯವನ್ನು ಸದರಿ ಅಧಿಕಾರಿಗಳು ವ್ಯಕ್ತಪಡಿಸಿದ್ದು ನಮ್ಮ ಸ್ಥಳೀಯ ಉತ್ಪನ್ನಗಳಿಗೆ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಅವಕಾಶ ಸಿಗಲಿದೆ ಎಂದು ತಿಳಿಸಿದರು

Prev Post ಡಾ. ಎಂ ಎ ಸಲೀಂ ನೂತನ ಪೋಲಿಸ್ ಮಹಾ ನಿರ್ದೇಕರಾಗಿ ನೇಮಕ
Next Post ಚಿಕ್ಕಮಗಳೂರು ಏರ್-ಸ್ಟ್ರಿಪ್ ನಿರ್ಮಾಣ: ಸಂಪುಟ ಸಭೆಗೆ ಕಡತ ಮಂಡಿಸಲು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಸೂಚನೆ