ಜಿ.ಬಿ.ಎ ಚುನಾವಣೆಯಲ್ಲೂ ವಿಜಯಪತಾಕೆ ಹಾರಿಸುವ ನಿಟ್ಟಿನಲ್ಲಿ ಶ್ರಮ ಹಾಕೋಣ
ಬೆಂಗಳೂರು: ಮುಂದೆಯೂ ಬಿಜೆಪಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೂಲಕ ರಾಜ್ಯದ ಜನರಿಗೂ ಒಳಿತಾಗಬೇಕು; ಪಕ್ಷದ ಕಾರ್ಯಕರ್ತರಿಗೂ ಒಳಿತಾಗಬೇಕೆಂಬ ಇಚ್ಛಾಶಕ್ತಿ ಇಟ್ಟುಕೊಂಡವರು ಡಿ.ವಿ. ಸದಾನಂದಗೌಡರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ, ರಾಜ್ಯದ ಜನತೆಯ ಪರವಾಗಿ ಶುಭ ಕೋರಿದರು. ಪಕ್ಷದ ಅಭಿಮಾನಿಗಳು, ಮುಖಂಡರು ದೊಡ್ಡ ಸಂಖ್ಯೆಯಲ್ಲಿ ಇದ್ದೀರಿ. ಡಿ.ವಿ.ಸದಾನಂದಗೌಡರು ನಮ್ಮೆಲ್ಲರಿಗೂ ಪ್ರೇರಣೆ ಎಂದು ತಿಳಿಸಿದರು. ‘ವಿಜಯೇಂದ್ರ ಅವರೇ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಬರುವ ದಿನಗಳಲ್ಲಿ ಬಿಜೆಪಿ ವಿಜಯಪತಾಕೆ ಮತ್ತೊಮ್ಮೆ ರಾಜ್ಯದಲ್ಲಿ ಹಾರಬೇಕು. ಇದಕ್ಕಾಗಿ ನಾವು- ನೀವು ಸೇರಿ ಸಂಘಟನೆಯನ್ನು ಬಲಪಡಿಸೋಣ; ಒಟ್ಟಿಗೆ ಪ್ರವಾಸ ಮಾಡೋಣ’ ಎಂಬ ಮಾತುಗಳನ್ನು ಸದಾನಂದಗೌಡರು ಹೇಳಿದ್ದಾರೆ ಎಂದು ನೆನಪಿಸಿಕೊಂಡರು.
ಡಿ.ವಿ.ಸದಾನಂದಗೌಡರ ಮಾರ್ಗದರ್ಶನ- ಆಶೀರ್ವಾದದೊಂದಿಗೆ ನಾವೆಲ್ಲರೂ ಒಟ್ಟಾಗಿ, ಒಂದಾಗಿ ಪಕ್ಷವನ್ನು ಬಲಪಡಿಸಲು ಹೆಜ್ಜೆಯನ್ನು ಮುಂದೆ ಇಡೋಣ. ಮುಂಬರುವ ಜಿ.ಬಿ.ಎ ಚುನಾವಣೆಯಲ್ಲೂ ವಿಜಯಪತಾಕೆ ಹಾರಿಸುವ ನಿಟ್ಟಿನಲ್ಲಿ ಶ್ರಮ ಹಾಕೋಣ ಎಂದು ನುಡಿದರು. ಪಕ್ಷದ ಪದಾಧಿಕಾರಿಗಳು, ಶಾಸಕರು, ಪ್ರಮುಖರು ಇದ್ದರು.







Comments
Leave a Comment